![sri sri sanskar kendra](https://www.artofliving.org/in-en/app/uploads/bis-images/15229/2023/08/sri-sri-sanskar-kendra-720x480-f50_50.jpg)
ಶ್ರೀ ಶ್ರೀ ಸಂಸ್ಕಾರ ಕೇಂದ್ರ
ಶ್ರೀ ಶ್ರೀ ಮೌಲ್ಯಗಳು ಮತ್ತು ಸಂಸ್ಕೃತಿ ಕೇಂದ್ರ (SSCVC)
“ಒಂದು ಸಸಿಯು ಸಂಪೂರ್ಣವಾಗಿ ಬೆಳೆಯಲು ನೀರೆರೆಯಬೇಕು. ಅಂತೆಯೇ ಪುಟ್ಟ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಪೋಷಿಸಲು ಸಂಸ್ಕಾರಗಳು ಬೇಕು.”
- ಗುರುದೇವ್ ಶ್ರೀ ಶ್ರೀ ರವಿ ಶಂಕರ್
ನೋಂದಾಯಿಸಿಶ್ರೀ ಶ್ರೀ ಸಂಸ್ಕಾರ ಕೇಂದ್ರದ ಕುರಿತು
ಸಹಾನುಭೂತಿ, ದಯೆ, ಉದಾರತೆ, ಕ್ಷಮೆ, ಗೌರವ, ಪ್ರಾಮಾಣಿಕತೆ, ಸಮಗ್ರತೆ, ತೃಪ್ತಿ ಮುಂತಾದ ಮೌಲ್ಯಗಳು ಪ್ರತಿಯೊಂದು ಸಮಾಜದಲ್ಲೂ ಹಾಸುಹೊಕ್ಕಾಗಿವೆ. ಚಿಕ್ಕಚಿಕ್ಕ ಕುಟುಂಬಗಳು, ಮಾಧ್ಯಮದ ಪ್ರಭಾವ, ಸಮಯದ ಅಭಾವ ಮತ್ತು ನಾಗಾಲೋಟದ ಜೀವನಗಳು ಮಕ್ಕಳನ್ನು ನಮ್ಮ ಭವ್ಯ ಪರಂಪರೆಯಿಂದ ದೂರಮಾಡಿ ಮಾನವೀಯ ಮೌಲ್ಯಗಳನ್ನು ನಿರ್ಲಕ್ಷಿಸುವಂತೆ ಮಾಡುತ್ತವೆ.
ಶ್ರೀ ಶ್ರೀ ಸಂಸ್ಕಾರ ಕೇಂದ್ರಗಳಲ್ಲಿ ಮಕ್ಕಳು ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಅದರ ವಿವಿಧತೆಯನ್ನು ಅರ್ಥಮಾಡಿಕೊಂಡು ನಮ್ಮ ಸಂಸ್ಕೃತಿಯ ಆಧಾರಭೂತ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಮತ್ತು ಉತ್ತಮ ಗುಣಗಳನ್ನು ಬೆಳೆಸಿಕೊಳ್ಳುವಂತೆ ಪ್ರೇರಣೆ ದೊರೆಯುತ್ತದೆ.
ಕಥೆಗಳು, ಶ್ಲೋಕಗಳು, ಮಂತ್ರಪಠಣ, ಕ್ರೀಡೆಗಳು, ಯೋಗ ಮತ್ತು ಇತರ ಚಟುವಟಿಕೆಗಳು ಶ್ರೀ ಶ್ರೀ ಸಂಸ್ಕಾರ ಕೇಂದ್ರದ ಕಾರ್ಯಕ್ರಮಗಳ ಮುಖ್ಯಭಾಗವಾಗಿವೆ. ಪರಸ್ಪರ ಸಂವಾದದ ಮೂಲಕ ನಡೆಯುವ ಆಸಕ್ತಿದಾಯಕ ತರಗತಿಗಳು ಮಕ್ಕಳ ಶಾಲಾ ವಿದ್ಯಾಭ್ಯಾಸಕ್ಕೆ ಪೂರಕವಾಗಿರುತ್ತವೆ. ಇವು ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸಿ ಅವರ ಸರ್ವಾಂಗೀಣ ಅಭಿವೃದ್ಧಿಗೆ ಸಹಾಯಮಾಡುತ್ತವೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೀ ಶ್ರೀ ಸಂಸ್ಕಾರ ಕೇಂದ್ರಗಳನ್ನು ಶ್ರೀ ಶ್ರೀ ಸೆಂಟರ್ಸ್ ಫಾರ್ ವ್ಯಾಲ್ಯೂಸ್ ಅಂಡ್ ಕಲ್ಚರ್ (SSCVC) ಎಂದು ಕರೆಯಲಾಗುತ್ತದೆ.
![YouTube Thumbnail](https://www.artofliving.org/in-en/app/uploads/2023/11/sanskar-kendra.jpg)
ಈ ಕಾರ್ಯಕ್ರಮದಿಂದ ಮಕ್ಕಳಿಗೆ ಏನು ಸಿಗುತ್ತದೆ?
![icon](https://www.artofliving.org/in-en/app/uploads/2023/06/Group.png)
ಮಾನವೀಯ ಮೌಲ್ಯಗಳ ಅಳವಡಿಕೆ
ಬೇರೆಯವರ ಬಗ್ಗೆ ಕಾಳಜಿ, ಗೌರವ, ಜವಾಬ್ದಾರಿ, ಪ್ರಾಮಾಣಿಕತೆ, ಉದಾರತೆ ಮುಂತಾದ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ನಿಮ್ಮ ಮಕ್ಕಳು ಬೆಳೆಯುವುದನ್ನು ನೀವೇ ನೋಡುವಿರಿ.
![icon](https://www.artofliving.org/in-en/app/uploads/2023/07/heart.png)
ಮುಂದಿನ ಬದುಕಿಗೆ ಭದ್ರ ಬುನಾದಿ
ಮಕ್ಕಳು ಚಿಕ್ಕವರಾಗಿರುವಾಗಲೇ ಉತ್ತಮ ಸಂಸ್ಕಾರವನ್ನು ರೂಢಿಸಿಕೊಂಡರೆ ಅವರು ತಮ್ಮ ಬದುಕಿನ ಕೌಶಲ್ಯಗಳನ್ನು ಹೆಚ್ಚಿಸಿಕೊಂಡು ತಮ್ಮ ಜವಾಬ್ದಾರಿಗಳನ್ನು ಸಂತೋಷದಿಂದ ನಿರ್ವಹಿಸಲು ಸಮರ್ಥರಾಗುತ್ತಾರೆ, ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಲು ಸಿದ್ಧರಾಗುತ್ತಾರೆ.
![icon](https://www.artofliving.org/in-en/app/uploads/2023/07/hands.png)
ಪರಂಪರೆಯ ಬಗ್ಗೆ ಗೌರವ ಬೆಳೆಯುತ್ತದೆ
ಮಕ್ಕಳು ವೈಜ್ಞಾನಿಕ ಮನೋಭಾವ ಹೊಂದುತ್ತಾರೆ. ತಮ್ಮ ಸನಾತನ ಪರಂಪರೆಯನ್ನು ಅರ್ಥಮಾಡಿಕೊಂಡು ಜೀವನದ ಬಗ್ಗೆ ವಿಶಾಲದೃಷ್ಟಿಕೋನವನ್ನು ಹೊಂದುತ್ತಾರೆ.
![icon](https://www.artofliving.org/in-en/app/uploads/2023/06/Group-3805.png)
ಸಂಭ್ರಮ ಮತ್ತು ಜ್ಞಾನ
ಕುಟುಂಬಗಳ ಒಗ್ಗಟ್ಟು ಬಲವಾಗುತ್ತದೆ. ಹಬ್ಬಹರಿದಿನಗಳನ್ನು ಜೊತೆಯಾಗಿ ಆಚರಿಸುವಾಗ ಮಕ್ಕಳ ಅರಿವಿನ ಮಟ್ಟ ಹೆಚ್ಚುತ್ತದೆ. ಜೊತೆಗೆ ಅವರು ಸಮಾಜ ಮತ್ತು ಪರಿಸರದ ಜೊತೆ ಹೆಚ್ಚಿನ ಪ್ರೇಮದಿಂದ ವರ್ತಿಸುತ್ತಾರೆ.
![icon](https://www.artofliving.org/in-en/app/uploads/2023/06/humidity.png)
ನೆನಪಿನ ಶಕ್ತಿ ಮತ್ತು ಏಕಾಗ್ರತೆ
ಎರಡು ವರ್ಷಗಳ ಕಾಲ ಸತತ ಮಂತ್ರಪಠಣವನ್ನು ಅಭ್ಯಾಸ ಮಾಡಿದವರು ನೆನಪಿನ ಶಕ್ತಿಯ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾರೆ. ಅವರ ತಪ್ಪುಗಳ ಪ್ರಮಾಣ ಕಡಿಮೆಯಾಗಿದೆ ಮತ್ತು ತಮ್ಮ ಪರೀಕ್ಷೆಗಳನ್ನು ಎದುರಿಸುವ ಕ್ಷಮತೆ ಹೆಚ್ಚುತ್ತದೆ ಎಂದು ಸಂಶೋಧನೆಗಳ ಮೂಲಕ ಪ್ರಮಾಣಿತವಾಗಿದೆ. ಸಂಶೋಧನೆಯ ವಿವರಗಳನ್ನು ಓದಲು ಕೆಳಗಿನ ಕೊಂಡಿಯನ್ನು ಬಳಸಿ.
![icon](https://www.artofliving.org/in-en/app/uploads/2023/06/plant.png)
ಮಂತ್ರಪಠಣದ ಪ್ರಯೋಜನಗಳು
‘ಓಂ’ ಶಬ್ದದ ಉಚ್ಚಾರಣೆಯು ವೇಗಸ್ ನರವನ್ನು ಪ್ರಚೋದಿಸುತ್ತದೆ ಹಾಗೂ ಖಿನ್ನತೆ ಮತ್ತು ಅಪಸ್ಮಾರ(ಎಪಿಲೆಪ್ಸಿ)ವನ್ನು ಗುಣಪಡಿಸುತ್ತದೆ ಎಂದು ಸಂಶೋಧನೆಗಳು ಪ್ರಮಾಣಿಸಿವೆ. ಸಂಶೋಧನೆಯ ವಿವರಗಳನ್ನು ಓದಲು ಕೆಳಗಿನ ಕೊಂಡಿಯನ್ನು ಬಳಸಿ.
ಪ್ರಾಥಮಿಕ ಕಾರ್ಯಕ್ರಮಗಳು
(6-10 ವರ್ಷಗಳು)
- ಆನ್ ಲೈನ್ ಮಾಡ್ಯೂಲ್ M1-ಎ
- ಒಂದು ಗಂಟೆ ಅವಧಿಯ ಎಂಟು ತರಗತಿಗಳು
- ಆನ್ ಲೈನ್ ಮಾಡ್ಯೂಲ್ M1-ಬಿ
- ಒಂದು ಗಂಟೆ ಅವಧಿಯ ಎಂಟು ತರಗತಿಗಳು
- ಪ್ರತ್ಯಕ್ಷ ತರಗತಿ ಮಾಡ್ಯೂಲ್ M1
- ಎರಡು ಗಂಟೆ ಅವಧಿಯ 12 ತರಗತಿಗಳು
ರಾಮಾಯಣದ ಕಾರ್ಯಕ್ರಮಗಳು
(6-13 ವರ್ಷಗಳು)
- ಆನ್ ಲೈನ್ ಭಾಗ ಎ
- ಒಂದು ಗಂಟೆ ಅವಧಿಯ ಎಂಟು ತರಗತಿಗಳು
- ಆನ್ ಲೈನ್ ಭಾಗ ಬಿ
- ಒಂದು ಗಂಟೆ ಅವಧಿಯ ಎಂಟು ತರಗತಿಗಳು
- ಪ್ರತ್ಯಕ್ಷ ತರಗತಿಗಳು
- ಎರಡು ಗಂಟೆ ಅವಧಿಯ ಹತ್ತು ತರಗತಿಗಳು
ನನ್ನ ಮಗಳಿಗೆ ಕಾರ್ಯಕ್ರಮದಿಂದ ತುಂಬಾ ಸಂತೋಷವಾಗಿದೆ. ಎಲ್ಲಾ ಹಬ್ಬಗಳ ಮಹತ್ವದ ಬಗ್ಗೆ ಅವಳಿಗೆ ಈಗ ತಿಳಿದಿದೆ. ಅನೇಕ ಚಿಕ್ಕ ಕಥೆಗಳನ್ನು ಮತ್ತು ಮಂತ್ರಗಳನ್ನು ಅವಳು ಕಲಿತಿದ್ದಾಳೆ. ಅವಳು ಕಲಿತ ಕೆಲವು ಮಂತ್ರಗಳು ನನಗೂ ತಿಳಿದಿಲ್ಲ. ಅವಳು ಅವುಗಳನ್ನು ಪಠಿಸುವಾಗ ನನಗೆ ತುಂಬಾ…
![shilpa sssk parent tesimonials](https://www.artofliving.org/in-en/app/uploads/bis-images/101313/2023/08/shilpa-sssk-parent-tesimonials-60x60-f50_50.jpg)
ಶಿಲ್ಪಾ
ಶ್ರೀ ಶ್ರೀ ಸಂಸ್ಕಾರ ಕೇಂದ್ರದಿಂದಾಗಿ ನನ್ನ ಮಗನಾದ ನಿತ್ಯನ್ ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಸಾಕಷ್ಟು ಶ್ಲೋಕಗಳನ್ನು ಮತ್ತು ಸಣ್ಣ ಕಥೆಗಳನ್ನು ಕಲಿತಿದ್ದಾನೆ. ಈಗ ನನಗೆ ಮನೆಕೆಲಸದಲ್ಲಿ ಸಹಾಯ ಮಾಡುತ್ತಾನೆ. ಇಂತಹ ಶಿಬಿರಗಳಿಗೆ ಹೋಗುವುದು ಅವನಿಗೆ ಇಷ್ಟವಾಗಿದೆ.
![Darshini parent sssk testimonial](https://www.artofliving.org/in-en/app/uploads/bis-images/101316/2023/08/Darshini-parent-sssk-testimonial-60x60-f50_50.jpg)
ದರ್ಶಿನಿ
ಬ್ರಿಶಾಳಲ್ಲಿ ಈಗ ತುಂಬಾ ಬದಲಾವಣೆಯು ಕಂಡು ಬಂದಿದೆ. ಹಿಂದೆ ಅವಳು ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಅವಳು ತುಂಬಾ ನಾಚಿಕೆಯ ಸ್ವಭಾವದವಳಾಗಿದ್ದಳು. ಶಿಬಿರದಲ್ಲಿ ಪಾಲ್ಗೊಂಡ ಬಳಿಕ ಈಗ ಆಕಾಶದೆತ್ತರಕ್ಕೆ ಬೆಳೆದಿದ್ದಾಳೆ. ತುಂಬಾ ಸಂತೋಷವಾಗಿದ್ದಾಳೆ.
![ashish sssk parent testimonial](https://www.artofliving.org/in-en/app/uploads/bis-images/101319/2023/08/ashish-sssk-parent-testimonial-60x60-f50_50.jpg)
ಆಶಿಶ್
ತರಬೇತಿಗಳು ಅದ್ಭುತವಾಗಿದ್ದವು. ಯೋಗ ,ಆಟಗಳು, ಕಥೆಗಳು, ಶ್ಲೋಕಗಳು, ಮುಂತಾದ ವಿವಿಧ ವಿಷಯಗಳನ್ನು ಕಲಿತುಕೊಂಡು, ನನ್ನ ಮಗನು ತುಂಬಾ ಸಂತೋಷವಾಗಿದ್ದಾನೆ. ಕೆಲವು ಮನೆಯಲ್ಲಿಯೇ ಮಾಡುವ ಔಷಧಿಗಳ ಬಗ್ಗೆಯೂ ಅವನು ಆಗಾಗ ಹೇಳುತ್ತಾನೆ.
![gomathy sssk parent testimonial](https://www.artofliving.org/in-en/app/uploads/bis-images/101322/2023/08/gomathy-sssk-parent-testimonial-60x60-f50_50.jpg)
ಗೋಮತಿ
ಸಂಸ್ಥಾಪಕರು
ಗುರುದೇವ ಶ್ರೀ ಶ್ರೀ ರವಿಶಂಕರ್
ಗುರುದೇವ್ ಶ್ರೀ ಶ್ರೀ ರವಿಶಂಕರ್, ಇವರು ಜಾಗತಿಕ ಮಾನವತಾವಾದಿ, ಆಧ್ಯಾತ್ಮಿಕ ನಾಯಕರು ಮತ್ತು ಶಾಂತಿಯ ರಾಯಭಾರಿ, ಎಂಬುದಾಗಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇವರು ಒತ್ತಡ-ಮುಕ್ತ ಹಾಗೂ ಹಿಂಸಾ-ಮುಕ್ತ ಸಮಾಜದ ನಿರ್ಮಾಣಕ್ಕಾಗಿ, ವಿಶ್ವದಾದ್ಯಂತವೂ, ಅಭೂತ ಪೂರ್ಣವಾದ ಚಳುವಳಿಯನ್ನು ಮುನ್ನಡೆಸಿದ್ದಾರೆ.
ಇನ್ನಷ್ಟು ತಿಳಿಯಿರಿನಾನು ಕಾರ್ಯಕ್ರಮದ ಬಗ್ಗೆ ಆಸಕ್ತಿಯಿದೆ, ಆದರೆ ನನಗೆ ಪ್ರಶ್ನೆಗಳಿವೆ…
ರಾಮಾಯಣದ ಕಾರ್ಯಕ್ರಮಗಳಿಗಿಂತಲೂ ಪ್ರಾಥಮಿಕ ಕಾರ್ಯಕ್ರಮವು ಹೇಗೆ ವಿಭಿನ್ನವಾಗಿದೆ?
ಅಂತರ್ಜಾಲದಲ್ಲಿ ಮಕ್ಕಳಿಗಾಗಿ ಅನೇಕ ಅನ್ ಲೈನ್ ತರಗತಿಗಳಿವೆ. ಈ ಇನ್ನೊಂದರಿಂದ ಹೆಚ್ಚಿನ ಹೊರೆಯಾಗಬಹುದು. ದಯವಿಟ್ಟು ಮಾರ್ಗದರ್ಶನ ನೀಡಿ.
ನನ್ನ ಮಗ/ಮಗಳು ಪ್ರಾಥಮಿಕ ಕಾರ್ಯಕ್ರಮದ ಎರಡೂ ಆನ್ ಲೈನ್ ಮಾಡ್ಯೂಲುಗಳನ್ನು ತೆಗೆದುಕೊಳ್ಳಬೇಕೆ?
ಎರಡೂ ಆನ್ ಲೈನ್ ಮಾಡ್ಯೂಲುಗಳು (M1ಎ ಹಾಗೂ M1ಬಿ) ಪರಸ್ಪರವಾಗಿ ಪೂರಕ ಕಲಿಕೆಯಾಗಿದ್ದು ಬೇರೆಬೇರೆ ಮೌಲ್ಯಗಳ ಆಧಾರದ ಮೇಲೆ ನಿರೂಪಿತವಾಗಿವೆ. ಎರಡೂ ಪ್ರತ್ಯೇಕವಾಗಿ ವಿಶಿಷ್ಟವಾದ ಮಾಡ್ಯೂಲುಗಳು. ಎರಡರಲ್ಲಿಯೂ ಪ್ರತ್ಯೇಕವಾದ ಶ್ಲೋಕಗಳು, ಮಂತ್ರಪಠಣ, ಚಟುವಟಿಕೆಗಳು ಮತ್ತು ವಿಶೇಷತೆಗಳು ಇರುತ್ತವೆ. ಹೀಗಾಗಿ, ಮೊದಲು ಇದೇ ಮಾಡ್ಯೂಲು ತೆಗೆದುಕೊಳ್ಳಬೇಕೆಂದೇನೂ ಇಲ್ಲ. ಯಾವುದನ್ನು ಬೇಕಾದರೂ ಬೇಕಾದರೂ ಮೊದಲು ತೆಗೆದುಕೊಳ್ಳಬಹುದು.