right directions to sleep

ಗಾಢನಿದ್ರೆ ಮತ್ತು ಒತ್ತಡ ನಿವಾರಣೆ

ಈ ಶಿಬಿರದಲ್ಲಿ ನಿಮ್ಮ ಮನಸ್ಸನ್ನು ಆತಂಕಮುಕ್ತಗೊಳಿಸಲು ಅತ್ಯಂತ ಪ್ರಭಾವಯುತವಾದ ತಂತ್ರಗಳನ್ನು ಕಲಿಯಿರಿ.

ದೇಹ-ಮನಸ್ಸನ್ನು ಪುನರುಜ್ಜೀವನಗೊಳಿಸಿ • ಆಳವಾದ ವಿಶ್ರಾಂತಿಯನ್ನು ಅನುಭವಿಸಿ • ಉತ್ಪಾದಕತೆಯನ್ನು ಹೆಚ್ಚಿಸಿ

4 ದಿನಗಳ ಆನ್‌ಲೈನ್ ಸೆಷನ್‌ಗಳು (2.5 ಗಂಟೆ ಪ್ರತಿದಿನ)

*ನಿಮ್ಮ ದೇಣಿಗೆಯು ನಿಮಗೂ ಹಾಗೆಯೇ ಆರ್ಟ್ ಆಫ಼್ ಲಿವಿಂಗ್ ನ ಸಾಮಾಜಿಕ ಯೋಜನೆಗಳಿಗೂ ಸಹಕಾರಿ.

ನೋಂದಾಯಿಸಿ

ಕಾರ್ಯಾಗಾರದಿಂದ ನಾನು ಏನು ಪಡೆಯುತ್ತೇನೆ?

icon

ಸಮಗ್ರವಾದ ಪುನಶ್ಚೈತನ್ಯದಿಂದ ಕೂಡಿದ ಜೀವನ

ಉಸಿರಾಟವನ್ನು ನಿಯಂತ್ರಿಸಿದಾಗ, ಮನಸ್ಸನ್ನು ಸಹ ನೀವು ನಿಯಂತ್ರಿಸುತ್ತೀರಿ. ಜೀವನದ ಗುಣಮಟ್ಟವು ನಿಮ್ಮ ಮನಸ್ಸಿನ ಸ್ಥಿತಿಯಿಂದ ನಿರ್ಧರಿಸಲಾಗುತ್ತದೆ. ಪ್ರಾಣಾಯಾಮಗಳು ಅಥವಾ ಉಸಿರಾಟದ ಪ್ರಕ್ರಿಯೆಗಳು, ಸುದರ್ಶನ ಕ್ರಿಯೆ ಮತ್ತು ಆಯುರ್ವೇದವನ್ನು ಅಳವಡಿಸಿಕೊಂಡಿರುವ ಜೀವನಶೈಲಿಯು ದೇಹ ಮತ್ತು ಮನಸ್ಸಿನಲ್ಲಿ ಸಾಮರಸ್ಯವನ್ನು ತರುತ್ತದೆ ಹಾಗು ನಿದ್ರೆಯಲ್ಲಿ ಉತ್ತಮವಾದ ವಿಶ್ರಾಂತಿಯನ್ನು ದೊರಕಿಸುತ್ತದೆ.

icon

ಶುಭ ರಾತ್ರಿಗಳು, ಚೈತನ್ಯಪೂರ್ಣ ಹಗಲುಗಳು

ನಿದ್ರೆಯಲ್ಲಿನ ಅಡಚಣೆಗಳು ಮತ್ತು ನಿದ್ರಾಹೀನತೆಗಳು ಹೃದ್ರೋಗ, ಪಾರ್ಶ್ವವಾಯು, ಮಧುಮೇಹ, ಬೊಜ್ಜು, ಖಿನ್ನತೆ, ನೆನಪಿನ ಸಮಸ್ಯೆಗಳು ಮತ್ತು ಲೈಂಗಿಕ ನಿಷ್ಕ್ರಿಯೆಗಳಂತಹ ಸಮಸ್ಯೆ / ರೋಗಗಳೊಂದಿಗೆ ಸಂಬಂಧ ಹೊಂದಿದೆ. ಉತ್ತಮ ಆರೋಗ್ಯಕ್ಕೆ ಉತ್ತಮ ನಿದ್ರೆ ಅಗತ್ಯ ಏಕೆಂದರೆ ಅದು ಹಾರ್ಮೋನುಗಗಳು, ವ್ಯಕ್ತಿಯ ಮನಸ್ಥಿತಿ ಮತ್ತು ತೂಕದ ಮೇಲೆ ಪರಿಣಾಮ ಬೀರುವುದು. ಸುದರ್ಶನ ಕ್ರಿಯೆಯು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ನಿದ್ರಾಹೀನತೆಯನ್ನು ಪರಿಣಾಮಕಾರಿಯಾಗಿ ಗುಣಪಡಿಸುತ್ತದೆ.

icon

ವೇಗಸ್ ನರವನ್ನು ಸಕ್ರಿಯಗೊಳಿಸುತ್ತದೆ

ಸಿಂಪಥೆಟಿಕ್ ನರ್ವಸ್ ಸಿಸ್ಟಮ್ ನಿಯಂತ್ರಣವನ್ನು ಕಳೆದುಕೊಳ್ಳುವುದರಿಂದ ದೈಹಿಕ ಮಟ್ಟದಲ್ಲಿ, ಆತಂಕದ ಸಮಸ್ಯೆಯುಂಟಾಗುತ್ತದೆ. ವೇಗಸ್ ನರವನ್ನು ಸಕ್ರಿಯಗೊಳಿಸುವುದರಿಂದ ಇದನ್ನು ನಿಭಾಯಿಸಲು ಸಾಧ್ಯ. ಪ್ರಾಣಾಯಾಮ, ಸುದರ್ಶನ ಕ್ರಿಯೆ ಮತ್ತು ಧ್ಯಾನದ ನಿಯಮಿತ ಅಭ್ಯಾಸವು ನಿಮ್ಮ ನರಮಂಡಲವನ್ನು ಹೆಚ್ಚು ಶಕ್ತಿಶಾಲಿಗೊಳಿಸಿ ಚೈತನ್ಯಪೂರ್ಣವನ್ನಾಗಿ ಮಾಡುತ್ತದೆ.

icon

ಉತ್ತಮ ಉತ್ಪಾದಕತೆ ಮತ್ತು ಮಾನಸಿಕ ಶಾಂತಿ

ಶಿಬಿರದ ತಂತ್ರಗಳು ನರಮಂಡಲಕ್ಕೆ ಸಂಪೂರ್ಣ ವಿಶ್ರಾಮವನ್ನು ನೀಡಿ, ಗಾಢವಾದ ನಿದ್ರೆ ಮಾಡಲು ಅನುವು ಮಾಡಿಕೊಡುತ್ತವೆ. ಇದು ಒಟ್ಟಾರೆ ನಮ್ಮ ಆರೋಗ್ಯದ ಮೇಲೆ ಪ್ರಬಲ ಪರಿಣಾಮವನ್ನು ಬೀರಿ ಉತ್ತಮ ನಿದ್ರೆಯ ಅಭ್ಯಾಸವನ್ನು ಒದಗಿಸುತ್ತದೆ. ಹೊಸ ಮಟ್ಟದ ಉತ್ಪಾದಕತೆ, ಶಕ್ತಿ ಮತ್ತು ಮಾನಸಿಕ ಶಾಂತಿಗಾಗಿ ಪ್ರಾಯೋಗಿಕ ಸಲಹೆಗಳನ್ನು ಪಡೆದುಕೊಳ್ಳುವಿರಿ.

ಸುದರ್ಶನ ಕ್ರಿಯೆಯ ಬಗ್ಗೆ ವಿಜ್ಞಾನವು ಏನು ಹೇಳುತ್ತದೆ?

ಸುದರ್ಶನಕ್ರಿಯೆಯನ್ನು ಕುರಿತು ಈವರೆಗೂ 100ಕ್ಕಿಂತಲೂ ಹೆಚ್ಚು ಸ್ವತಂತ್ರ ಸಂಶೋಧನೆಗಳನ್ನು ಮಾಡಲಾಗಿದ್ದು, ಇವುಗಳನ್ನು ಜಗತ್ತಿನ ಎಲ್ಲಾ ಪ್ರಸಿದ್ಧವಾದ ಜರ್ನಲ್ ಗಳಲ್ಲಿ ಪ್ರಕಟವಾಗಿವೆ.

33%

6 ವಾರಗಳಲ್ಲಿ ಹೆಚ್ಚುತ್ತದೆ

ರೋಗನಿರೋಧಕ ಶಕ್ತಿ

57%

6 ವಾರಗಳಲ್ಲಿ ಕಡಿಮೆಯಾಗುತ್ತದೆ

ಒತ್ತಡ ಸೃಷ್ಟಿಸುವ ಹಾರ್ಮೋನುಗಳು

21%

1 ವಾರದಲ್ಲಿ ಹೆಚ್ಚುತ್ತದೆ

ಜೀವನದಲ್ಲಿ ತೃಪ್ತಿ

ಸಂಸ್ಥಾಪಕರು

ಗುರುದೇವ ಶ್ರೀ ಶ್ರೀ ರವಿಶಂಕರ್

ಗುರುದೇವ್ ಶ್ರೀ ಶ್ರೀ ರವಿಶಂಕರ್, ಇವರು ಜಾಗತಿಕ ಮಾನವತಾವಾದಿ, ಆಧ್ಯಾತ್ಮಿಕ ನಾಯಕರು ಮತ್ತು ಶಾಂತಿಯ ರಾಯಭಾರಿ, ಎಂಬುದಾಗಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇವರು ಒತ್ತಡ-ಮುಕ್ತ ಹಾಗೂ ಹಿಂಸಾ-ಮುಕ್ತ ಸಮಾಜದ ನಿರ್ಮಾಣಕ್ಕಾಗಿ, ವಿಶ್ವದಾದ್ಯಂತವೂ, ಅಭೂತ ಪೂರ್ಣವಾದ ಚಳುವಳಿಯನ್ನು ಮುನ್ನಡೆಸಿದ್ದಾರೆ.

ಇನ್ನಷ್ಟು ತಿಳಿಯಿರಿ

ನಾನು ಸೇರಬೇಕೆಂದಿದ್ದೇನೆ ಆದರೆ....

ಈ ಅಭ್ಯಾಸದಿಂದ ನನ್ನ ಆರೋಗ್ಯವು ಸುಧಾರಿಸುತ್ತದೆಯೆ?

ಹೌದು, ಖಂಡಿತವಾಗಿಯು! ಸುದರ್ಶನ ಕ್ರಿಯೆಯ ನಿತ್ಯಾಭ್ಯಾಸದಿಂದ ನಿದ್ದೆಯ ಗುಣಮಟ್ಟ ಸುಧಾರಿಸುತ್ತದೆ, ರೋಗನಿರೋಧಕ ಶಕ್ತಿಯು ವರ್ಧಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ, ಖಿನ್ನತೆಯ ಮಟ್ಟವೂ ಕುಗ್ಗುತ್ತದೆ. ಈ ಕಾರ್ಯಕ್ರಮದಿಂದ ಲಾಭ ಪಡೆದವರ ಹೇಳಿಕೆಗಳನ್ನು ನೀವು ಓದಬೇಕಷ್ಟೆ. ನಿಮಗೇನಾದರೂ ಆರೋಗ್ಯದ ಸಮಸ್ಯೆಗಳಿದ್ದರೆ, ನಿಮ್ಮ ಶಿಕ್ಷಕರಿಗೆ ಮೊದಲೇ ತಿಳಿಸಿ. ಇದರಿಂದ ನಿಮಗೆ ಸೂಕ್ತವಾದಂತಹ, ಉತ್ತಮವಾದ ಅನುಭವವು ಸಿಗುವಂತೆ ಶಿಕ್ಷಕರು ಮಾಡಬಹುದು.

ನಾಲ್ಕು ದಿನಗಳ ಆನ್‌ಲೈನ್ ಶಿಬಿರವು ನಿಜವಾಗಿಯೂ ನನ್ನ ಜೀವನವನ್ನು ಬದಲಾಯಿಸಬಹುದೇ?

ಒಂದೇ ಕ್ಷಣದಲ್ಲಿ ಜೀವನವು ಬದಲಾಗಬಹುದು. ಪ್ರೀತಿಪಾತ್ರರೊಂದಿಗೆ ಕಳೆಯುವ ಒಂದು ಕ್ಷಣ ಅಥವಾ ಗಾಡಿಯನ್ನು ಚಾಲನೆ ಮಾಡುವಾಗ ಅರಿವನ್ನು ಕಳೆದುಕೊಳ್ಳುವ ಕ್ಷಣ ಇವೆರಡೂ ಜೀವನವನ್ನೇ ಬದಲಾಯಿಸಬಹುದು. ಒಂದು "ಯುರೇಕಾ" ಕ್ಷಣವು ನಿಮ್ಮ ಜೀವನ ಮಾತ್ರವಲ್ಲದೆ ಇಡೀ ಪ್ರಪಂಚದ ಜೀವನವನ್ನು ಬದಲಾಯಿಸಬಹುದು. ಜೀವನವನ್ನು ಬದಲಾಯಿಸುವುದಕ್ಕಿಂತ, ನಿಮ್ಮ ಜೀವನವನ್ನು ನೀವೇ ಬದಲಾಯಿಸಿಕೊಳ್ಳಲು ಸಾಧನಗಳನ್ನು ನೀಡುವುದರ ಮೂಲಕ, ಈ ಶಿಬಿರವು ನಿಮಗೆ ಸಹಾಯಕವಾಗುತ್ತದೆ. ಪ್ರಪಂಚದಾದ್ಯಂತ ಲಕ್ಷಾಂತರ ಜನರು ಅಭಾಸ ಮಾಡುತ್ತಿರುವ, ವೈಜ್ಞಾನಿಕ ಸಂಶೋಧನೆಗಳಿಂದ ದೃಢೀಕರಿಸಲ್ಪಟ್ಟಿರುವ “ಸುದರ್ಶನ ಕ್ರಿಯೆಯ” ಪ್ರಕ್ರಿಯೆಯನ್ನು ಈ ನಾಲ್ಕು ದಿನಗಳ ಶಿಬಿರದಲ್ಲಿ ನೀವು ಕಲಿಯುವಿರಿ. ಇದನ್ನು ಅಭ್ಯಾಸ ಮಾಡಿದವರು ಅನೇಕ ಪರಿವರ್ತನೆಗಳನ್ನು ತಮ್ಮ ಜೀವನದಲ್ಲಿ ಕಂಡಿದ್ದಾರೆ.

ಅಲ್ಲದೇ, ನೀವು ಫಾಲೋ-ಅಪ್ ಸೆಷನ್‌ಗಳ ಮತ್ತು ಗ್ಲೋಬಲ್ ಕಮ್ಯುನಿಟಿ ಆಫ್ ಮೆಂಟೋರ್ಸ್ ಗಳ ಪ್ರಯೋಜನವನ್ನು ಉಚಿತವಾಗಿ ಪಡೆಯುವಿರಿ. ಆರ್ಟ್ ಆಫ್ ಲಿವಿಂಗ್‌ನ ಉನ್ನತ ಕಾರ್ಯಕ್ರಮಗಳಿಗೆ ಸಹ ನೀವು ದಾಖಲಾಗಬಹುದು. ನಿಮ್ಮ ಪ್ರಯಾಣವು ಈಗ ತಾನೇ ಆರಂಭವಾಗಿದೆ.

ಅಡ್ಡ-ಪರಿಣಾಮಗಳೇನಾದರೂ ಇವೆಯೆ?

ಇದರ ಒಂದೇ ಒಂದು ಅಡ್ಡ-ಪರಿಣಾಮವೆಂದರೆ, ಎಂದಿಗೂ ಮಾಸದ ಮುಗುಳ್ನಗೆ! ಸುದರ್ಶನ ಕ್ರಿಯೆಯನ್ನು ಜಾಗತಿಕವಾಗಿ, ಪ್ರತಿನಿತ್ಯ ಅನೇಕ ಮಿಲಿಯಾಂತರ ಜನರು ಅಭ್ಯಾಸ ಮಾಡುತ್ತಾರೆ ಮತ್ತು ಅದರಿಂದ ಉತ್ತಮ ಆರೋಗ್ಯವನ್ನು ಪಡೆದುಕೊಂಡಿದ್ದಾರೆ. ನಮ್ಮ ಪ್ರಕ್ರಿಯೆಗಳು ಅಭ್ಯಾಸ ಮಾಡಲು ಬಲು ಸುರಕ್ಷಿತವಾದವು. ನಿಮಗೆ ಆಸ್ತಮ, ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಬೆನ್ನು ನೋವಿನ ಸಮಸ್ಯೆಗಳಿದ್ದಲ್ಲಿ, ಕಾರ್ಯಕ್ರಮದ ಸಮಯದಲ್ಲಿ ನಿಮಗೆ ಪ್ರತ್ಯೇಕವಾದ ಮಾರ್ಗದರ್ಶನವನ್ನು ನೀಡಲಾಗುತ್ತದೆ.

ನನಗೆ ಒತ್ತಡವಿಲ್ಲ. ಆದರೂ ಈ ಕಾರ್ಯಕ್ರಮವನ್ನು ನಾನೇಕೆ ಮಾಡಬೇಕು?

ನಿಮಗೆ ಒತ್ತಡವಿಲ್ಲದಿದ್ದರೆ ಅದು ಬಹಳ ಅದ್ಭುತವಾದ ವಿಷಯ! ನೀವು ಉತ್ತಮವಾದ ಜೀವನವನ್ನೇ ನಡೆಸುತ್ತಿರುವಿರಿ ಎಂದಾಯಿತು. ಆದರೆ ಹೀಗೂ ಆಲೋಚಿಸಿ ನೋಡಿ. ಹಣವೆಲ್ಲಾ ಖರ್ಚಾದ ನಂತರ ಹಣವನ್ನು ಕೂಡಿಡಬೇಕೆಂದು ನಿರ್ಧರಿಸುವಿರೇ? ಅಥವಾ ಅನಾರೋಗ್ಯದಿಂದ ಪೀಡಿತರಾದ ನಂತರವೇ ವ್ಯಾಯಾಮ ಮಾಡಬೇಕೆಂದು ನಿರ್ಧರಿಸುತ್ತೀರೇ? ಇಲ್ಲ. ಅಲ್ಲವೆ? ಆದ್ದರಿಂದ, ಭವಿಷ್ಯದಲ್ಲಿ ನಿಮಗೆ ಬೇಕಾಗುವ ಬಲವನ್ನು, ಸಹಿಷ್ಣುತೆಯನ್ನು ಈಗಿಂದಲೇ ಬೆಳೆಸಿಕೊಳ್ಳಬಹುದಲ್ಲವೆ? ಎಲ್ಲವೂ ನಿಮ್ಮ ನಿರ್ಧಾರದ ಮೇಲೆ ಅವಲಂಬಿಸಿದೆ. ನೀವು ಒತ್ತಡದಿಂದ ತುಂಬಿ ಹೋಗುವವರೆಗೂ ಕಾಯಬಹುದು. ಆಗಲೂ ನಿಮ್ಮ ಸಹಾಯಕ್ಕಾಗಿ ಈ ಕಾರ್ಯಾಗಾರವು ನಿಮಗಾಗಿ ಕಾಯುತ್ತಿರುತ್ತದೆ!

ದೇಣಿಗೆಯನ್ನು ಏಕೆ ಪಡೆಯುತ್ತೀರಿ?

ಮೊದಲನೆಯ ಕಾರಣವೆಂದರೆ, ಈ ಕಾರ್ಯಕ್ರಮಕ್ಕಾಗಿ ನಿಮ್ಮ ಸಮಯವನ್ನು ಮೀಸಲಿಡಲು ಬದ್ದತೆ.ಎರಡನೆಯ ಕಾರಣವೆಂದರೆ, ನಿಮಗೆ ಜೀವನಕ್ಕೆ ಅವಶ್ಯಕವಾದ ಕುಶಲತೆಗಳನ್ನು ಹೇಳಿಕೊಡುವುದರೊಡನೆ ನಿಮ್ಮ ದೇಣೆಗೆಯು ಭಾರತದಲ್ಲಿ ನಡೆಯುವ ಸೇವಾ ಕಾರ್ಯಗಳಿಗೆ, ಉದಾಹರಣೆಗೆ, 70,000 ಬುಡಕಟ್ಟು ಮಕ್ಕಳ ಶಿಕ್ಷಣ, 43 ನದಿಗಳ ಪುನಶ್ಚೇತನ ಕಾರ್ಯ, ಜೀವನೋಪಾಯದ ಕುಶಲತೆಗಳನ್ನು ಕಲಿತ 2,04,802 ಗ್ರಾಮೀಣ ಯುವಕರ ಸಬಲೀಕರಣ, 720 ಗ್ರಾಮಗಳನ್ನು ಸೌರದೀಪಗಳಿಂದ ವಿದ್ಯುದೀಕರಣಗೊಳಿಸುವಿಕೆಗೆ ವಿನಿಯೋಗವಾಗುತ್ತದೆ.