
ಡೈನಮಿಸಮ್ ಫಾರ್ ಸೆಲ್ಛ್ ಆಂಡ್ ನೇಷನ್ (DSN)
ವೈಯಕ್ತಿಕ ನಿರ್ಬಂಧಗಳಿಂದ ಮುಕ್ತಿ ಅನುಭವಿಸಿ ಮತ್ತು ಆಂತರಿಕ ಶಕ್ತಿ ಮತ್ತು ಸ್ಥಿರತೆಗೆ ಪ್ರಾಪ್ತಿಯನ್ನಾದರಿಸಿ.
ನಿಮ್ಮ ಅಡೆತಡೆಗಳನ್ನು ನಿವಾರಿಸಿಕೊಳ್ಳಿ • ನಿಮ್ಮ ಭಯಗಳನ್ನು ದೂರಮಾಡಿ • ನಿಮ್ಮ ಅಂತರಂಗದ ಶಕ್ತಿಯನ್ನು ಬಳಸಿರಿ
*ನಿಮ್ಮ ದೇಣಿಗೆಯು ನಿಮಗೂ ಹಾಗೆಯೇ ಆರ್ಟ್ ಆಫ಼್ ಲಿವಿಂಗ್ ನ ಸಾಮಾಜಿಕ ಯೋಜನೆಗಳಿಗೂ ಸಹಕಾರಿ.
ನೋಂದಾಯಿಸಿನಿಮ್ಮ ಮನಸ್ಸಿನ ಅನಂತ ಸಾಧ್ಯತೆಗಳನ್ನು ಅರಿವಿಗೆ ತಂದುಕೊಳ್ಳಿ
ನಿಮ್ಮ ಊಹೆಗೂ ಮೀರಿದಂತೆ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಿ

ಭಯಗಳನ್ನು ಗೆಲ್ಲುವುದರ
ನಿಮ್ಮ ಭಯಗಳನ್ನು ಗೆಲ್ಲುವುದರ ಮೂಲಕ ದೊರೆಯುವ ಸ್ವಾತಂತ್ರ್ಯದ ಸುಖವನ್ನು ಅನುಭವಿಸಿ

ವ್ಯತ್ಯಾಸ ಮಾಡಿ
ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ನೀವು ವಹಿಸಬಹುದಾದ ಪಾತ್ರವನ್ನು ಕಂಡುಕೊಳ್ಳಿ.

ನಿಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳಿ
ನಿಮ್ಮ ಬಗ್ಗೆ ಮತ್ತು ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗಿರುವ ಪೂರ್ವಕಲ್ಪನೆಗಳನ್ನು ಭಂಗಗೊಳಿಸಿ.
ಡಿಎಸ್ಎನ್ ಕಾರ್ಯಕ್ರಮದಲ್ಲಿ ಏಕೆ ಭಾಗವಹಿಸಬೇಕು?
ಜೀವನದ ಪರಿಪೂರ್ಣತೆಗೆ ಅಡ್ಡಿಮಾಡುವ ವೈಯಕ್ತಿಕವಾದ ಅಡೆತಡೆಗಳು, ಹಳೆಯ ಅಭ್ಯಾಸಗಳು ಮತ್ತು ಹಿಂಜರಿಕೆಗಳು ನಮ್ಮೆಲ್ಲರಲ್ಲೂ ಇವೆ. ಆದರೂ, ನಮಗಾಗಿ, ನಮ್ಮ ಕುಟುಂಬಕ್ಕಾಗಿ, ನಮ್ಮ ಸಮುದಾಯಕ್ಕಾಗಿ, ಇಡೀ ಜಗತ್ತಿಗಾಗಿ ಅತ್ಯುತ್ತಮವಾದುದನ್ನೇ ಮಾಡಬೇಕೆಂಬ ಬಲವಾದ ಹಂಬಲವೂ ನಮ್ಮೆಲ್ಲರಲ್ಲಿ ಇರುತ್ತದೆ.
ಡಿಎಸ್ಎನ್ ಒಂದು ಕಟ್ಟುನಿಟ್ಟಿನ ಪರಿವರ್ತನೆಯ ಕಾರ್ಯಕ್ರಮ. ಇದರ ಮೂಲಕ ಶಿಬಿರಾರ್ಥಿಗಳು ತಮ್ಮ ವೈಯಕ್ತಿಕ ಹಿಂಜರಿಕೆಗಳು ಮತ್ತು ಮಾನಸಿಕ ಅಡೆತಡೆಗಳನ್ನು ಮೀರುವುದರ ಮೂಲಕ ಅಂತರಂಗದ ಶಕ್ತಿ ಮತ್ತು ಸ್ಥಿರತೆಯನ್ನು ಸಾಧಿಸುತ್ತಾರೆ. ಜೊತೆಗೆ ಮನಸ್ಸಿನ ಎಲ್ಲೆಗಳನ್ನು ದಾಟಿ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳುವುದು ಸಾಧ್ಯವಾಗುತ್ತದೆ.
ಈ ಕಾರ್ಯಕ್ರಮವು, ಸಮಾಜದಲ್ಲಿ ವ್ಯವಹರಿಸುವಾಗ, ನನ್ನ ಮನಸ್ಸಿನಲ್ಲಿ ಇದ್ದಂತಹ ಅಡ್ಡಿ ಆತಂಕಗಳನ್ನು ತೆಗೆದುಹಾಕಲು ಸಹಾಯವಾಯಿತು. ನಮ್ಮಲ್ಲಿ ಪ್ರತಿಬದ್ಧತೆಯೊಂದು ಇದ್ದರೆ, ಒಬ್ಬ ವ್ಯಕ್ತಿ ಕೂಡ ಈ ಸಮಾಜದಲ್ಲಿ ಪರಿವರ್ತನೆಯನ್ನು ತರಲು ಸಾಧ್ಯವಿದೆ ಎನ್ನುವ ಅನುಭವವು ನನಗೆ ದೊರೆಯಿತು.
ಸಲಿವತಿ
ಡಿಎಸ್ಎನ್ ಪದವೀಧರೆ, ದುಬೈ ಯು ಎ ಈ
ಇತ್ತೀಚೆಗೆ ನಾನು ಡಿಎಸ್ಎನ್ ಎನ್ನುವ ಕಾರ್ಯಕ್ರಮವನ್ನು ಮಾಡಿದೆ. ನನಗೆ ಅತ್ಯುತ್ತಮವಾದ, ಸುಂದರವಾದ, ಅನುಭವವಾಯಿತು. ಜವಾಬ್ದಾರಿಯನ್ನು ತೆಗೆದುಕೊಂಡು ಈ ಜಗತ್ತಿಗೆ ನನ್ನಿಂದ ಸಾಧ್ಯವಾಗುವಷ್ಟು ಸೇವೆಯನ್ನು ಮಾಡಬೇಕು ಎನ್ನುವ ಸ್ಪೂರ್ತಿ ಬಂದಿದೆ. ನನ್ನ ಆತ್ಮವಿಶ್ವಾಸವು ಈಗ ಹೆಚ್ಚಾಗಿದೆ. ನಿಜವಾಗಿಯೂ ಇದು ಒಂದು ಅದ್ಭುತವಾದ ಕಾರ್ಯಕ್ರಮ.…
ಸಾಟ್ಚಿ ಬಾಲಿ
ಡಿಎಸ್ಎನ್ ಪದವಿಧರೆ, ಸಿಡ್ನಿ, ಆಸ್ಟ್ರೇಲಿಯಾ
ಈ ಕಾರ್ಯಕ್ರಮವು ನನ್ನೊಳಗೆ ಹೊಚ್ಚಹೊಸದಾಗಿದ್ದ ‘ನನ್ನನ್ನು’ಕಂಡುಕೊಳ್ಳಲು ಸಹಕಾರಿಯಾಯಿತು.
ಹಿಮಾನ್ ಷು ಕಾತಿ
ಡಿಎಸ್ ಎನ್ ಗ್ರಾಜುಯೇಟ್, ಭಾರತ
ಈ ಕಾರ್ಯಕ್ರಮವನ್ನು ಮಾಡಿದ್ದರಿಂದ, ಯಾವುದಾದರೂ ಕೆಲಸವನ್ನು ಮಾಡುತ್ತಿರುವಾಗ, ನನ್ನೊಳಗೆ ಅಡ್ಡಿಪಡಿಸುತ್ತಿರುವ ಗುಣಗಳ ಬಗ್ಗೆ ಅರಿವಾಯಿತು. ಈ ಕಾರ್ಯಕ್ರಮವನ್ನು ಮಾಡಿದ ಬಳಿಕ, ನನ್ನ ಮನಸ್ಸಿನಲ್ಲಿರುವ ಮುಜುಗರದಿಂದ ನನಗೆ ಬಿಡುಗಡೆ ದೊರೆತಿದೆ. ಆದುದರಿಂದ ಪ್ರತಿಯೊಬ್ಬರೂ ಈ ಕಾರ್ಯಕ್ರಮವನ್ನು ಮಾಡಲೇಬೇಕೆಂದು ನನ್ನ ಅಭಿಪ್ರಾಯ. ಯಾಕೆಂದರೆ ಎಲ್ಲರ…
ರವಿ ತೇಜ ಅಕೋಂದಿ
ಕೋ ಫೌಂಡರ್ ಮತ್ತು ಸಿಇಓ -ಐ ಮಜಿಯನ್ಸ್
ಡಿಎಸ್ಏನ್ ಶಿಬಿರವನ್ನು ಮಾಡುವ ಮೊದಲು ನನ್ನದೇ ಕೆಲವು ಕಲ್ಪನೆಗಳಿಂದ ನಾನು ತುಂಬಾ ನಾಚಿಕೆಯ ಸ್ವಭಾವದ ವ್ಯಕ್ತಿಯಾಗಿದ್ದೆ. ಈ ಕಾರ್ಯಕ್ರಮವು ನನ್ನ ಆತ್ಮವಿಶ್ವಾಸವನ್ನು ಮತ್ತು ಆಂತರಿಕ ಶಕ್ತಿಯನ್ನು ಹೆಚ್ಚು ಮಾಡಿತು. ನನ್ನಲ್ಲಿರುವ ಭಯವು ದೂರವಾಗಿ, ನಾನು ಧೈರ್ಯಶಾಲಿಯಾದೆ! ಇತರರೊಂದಿಗೆ ವ್ಯವಹರಿಸುವ ಕುಶಲತೆಯು ನನ್ನಲ್ಲಿ…
ಶರತ್ ಚಂದ್ರ
ಬಿ ಟೆಕ್. ಡಿಎಸ್ಎನ್ ಪದವೀಧರ
ಪ್ರಮುಖ ಅಂಶಗಳು
ಡಿಎಸ್ಎನ್ ಒಂದು ಕಟ್ಟುನಿಟ್ಟಿನ ಪರಿವರ್ತನೆಯ ಕಾರ್ಯಕ್ರಮ. ಇದರ ಮೂಲಕ ಶಿಬಿರಾರ್ಥಿಗಳು ವೈಯಕ್ತಿಕ ಹಿಂಜರಿಕೆಗಳು ಮತ್ತು ಮಾನಸಿಕ ಅಡೆತಡೆಗಳನ್ನು ಮೀರುವುದರ ಮೂಲಕ ಅಂತರಂಗದ ಶಕ್ತಿ ಮತ್ತು ಸ್ಥಿರತೆಯನ್ನು ಸಾಧಿಸುತ್ತಾರೆ.

ಈ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಸರಣಿ ಪ್ರಕ್ರಿಯೆಗಳಲ್ಲಿ ಮತ್ತು ಚರ್ಚೆಗಳಲ್ಲಿ ಭಾಗವಹಿಸುವ ಅವಕಾಶವಿರುತ್ತದೆ. ಇಲ್ಲಿ ನಿರ್ಮಾಣವಾಗುವ ಸಂವೇದನಾಶೀಲ ಮತ್ತು ಸ್ನೇಹಮಯ ವಾತಾವರಣದಲ್ಲಿ ಶಿಬಿರಾರ್ಥಿಗಳು ತಮ್ಮ ಜೀವನದ ನೈಜ ಸನ್ನಿವೇಶಗಳನ್ನು ಮತ್ತು ಅವುಗಳಿಗೆ ತಮ್ಮ ಪ್ರತಿಕ್ರಿಯೆಗಳನ್ನು ನೆನಪಿಸಿಕೊಳ್ಳುತ್ತಾರೆ. ತಮ್ಮಲ್ಲಿರುವ ಭಯ ಮತ್ತು ಹಿಂಜರಿಕೆಗಳನ್ನು ಮೀರುವ ತಂತ್ರಗಳನ್ನು ಅಭ್ಯಾಸ ಮಾಡುತ್ತಾರೆ.

“ಪದ್ಮಸಾಧನ” ಕ್ರಿಯೆಯು ನಿಮಗೆ ನಿಮ್ಮ ಅಂತರಂಗದ ಶಕ್ತಿಯನ್ನು ಬಳಸಿಕೊಳ್ಳಲು ಸಹಾಯ ಮಾಡುತ್ತದೆ. 45 ನಿಮಿಷಗಳ ಪದ್ಮಸಾಧನವು ಅನುಕ್ರಮವಾದ ಅನೇಕ ಯೋಗಾಸನಗಳ ಪದ್ಧತಿಯಾಗಿದ್ದು ಇದನ್ನು ಪ್ರತಿದಿನ ಅಭ್ಯಾಸ ಮಾಡುವುದರಿಂದ ಮನಸ್ಸು ಪ್ರಶಾಂತವಾಗುತ್ತದೆ, ದೇಹ ಸ್ವಸ್ಥವಾಗುತ್ತದೆ. ದಿವ್ಯವಾದ ಈ ಯೋಗಾಸನಗಳು ಮನಸ್ಸನ್ನು ಆಳವಾದ ಧ್ಯಾನಕ್ಕೆ ಅನುಗೊಳಿಸುತ್ತವೆ.

ಶಿಬಿರಾರ್ಥಿಗಳು ಪ್ರಾಚೀನ ಜ್ಞಾನದ ಬೆಳಕಿನಲ್ಲಿ ಉತ್ತಮ ಬದುಕಿನ ರಹಸ್ಯಗಳನ್ನು ಅರಿತು ಹೊಸಬದುಕನ್ನು ಪ್ರಾರಂಭಿಸುತ್ತಾರೆ. ಶಿಬಿರದಲ್ಲಿ ಪ್ರದರ್ಶಿಸುವ ಚಿಕ್ಕಚಿಕ್ಕ ವಿಡಿಯೋಗಳು ಮತ್ತು ಗುಂಪುಚರ್ಚೆಗಳು ಶಿಬಿರಾರ್ಥಿಗಳ ಬದುಕಿನಲ್ಲಿ ಅರಿವಿನ ಹೊಸ ಆಯಾಮಗಳನ್ನು ತೆರೆಯುವ ಮೂಲಕ ಉತ್ತಮ ಜೀವನವನ್ನು ನಡೆಸಲು ಮಾರ್ಗದರ್ಶನ ನೀಡುತ್ತವೆ.

ನಿಮ್ಮ ಸಾಮರ್ಥ್ಯದ ಅರಿವನ್ನು ತಂದುಕೊಂಡು ಅದನ್ನು ಸಮಾಜದ ಒಳಿತಿಗಾಗಿ ಹೇಗೆ ಬಳಸಬಹುದೆಂಬುದನ್ನು ತಿಳಿಯಿರಿ. ಸಮಾಜದಲ್ಲಿ ಬದಲಾವಣೆ ತರುವ ಅಚಲವಾದ ವಿಶ್ವಾಸವನ್ನು ಹೊಂದಿ, ಆ ಬದಲಾವಣೆಯಲ್ಲಿ ನಿಮ್ಮ ಭಾಗವಹಿಸುವಿಕೆಯ ಮಹತ್ತ್ವವನ್ನು ಅರಿತುಕೊಳ್ಳಿ.
ಸಂಸ್ಥಾಪಕರು
ಗುರುದೇವ ಶ್ರೀ ಶ್ರೀ ರವಿಶಂಕರ್
ಗುರುದೇವ್ ಶ್ರೀ ಶ್ರೀ ರವಿಶಂಕರ್, ಇವರು ಜಾಗತಿಕ ಮಾನವತಾವಾದಿ, ಆಧ್ಯಾತ್ಮಿಕ ನಾಯಕರು ಮತ್ತು ಶಾಂತಿಯ ರಾಯಭಾರಿ, ಎಂಬುದಾಗಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇವರು ಒತ್ತಡ-ಮುಕ್ತ ಹಾಗೂ ಹಿಂಸಾ-ಮುಕ್ತ ಸಮಾಜದ ನಿರ್ಮಾಣಕ್ಕಾಗಿ, ವಿಶ್ವದಾದ್ಯಂತವೂ, ಅಭೂತ ಪೂರ್ಣವಾದ ಚಳುವಳಿಯನ್ನು ಮುನ್ನಡೆಸಿದ್ದಾರೆ.
ಇನ್ನಷ್ಟು ತಿಳಿಯಿರಿ