ನಮ್ಮ ಕಾಲದ ದೊಡ್ಡ ಬಿಕ್ಕಟ್ಟಿನ ವಿರುದ್ಧ ಹೋರಾಡುವುದು

ಜಲಮೂಲವನ್ನು ಪುನರುಜ್ಜೀವನಗೊಳಿಸುವುದು; ಸಾಮೂಹಿಕವಾಗಿ ಬೃಹತ್ ಪ್ರಮಾಣದಲ್ಲಿ ಮರಗಳನ್ನು ನೆಟ್ಟು ಕಾಡುಗಳನ್ನು ಬೆಳೆಸುವುದು; ತ್ಯಾಜ್ಯವನ್ನು ನಿರ್ವಹಣೆ ಮಾಡುವ ಯಂತ್ರಗಳ ಬಳಕೆ; ಸ್ವಚ್ಛತಾ ಅಭಿಯಾನ ಮತ್ತು ಸಾವಯವ ಕೃಷಿಯ ವಿಧಾನಗಳನ್ನು ಜಾರಿಗೆ ತರುವುದು.

icon

ತಂತ್ರ

  • ದೊಡ್ಡ ಪ್ರಮಾಣದ ಮರ ನೆಡುವಿಕೆಗಳಂತಹ ಸಾಮಾಜಿಕ ಯೋಜನೆಗಳನ್ನು ಪ್ರಾರಂಭಿಸಿ.
  • ಮಣ್ಣಿನ ಗುಣಮಟ್ಟವನ್ನು ಕಾಪಾಡಲು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳಿ.

icon

ಪರಿಣಾಮ

  • ವಿಶ್ವಾದ್ಯಂತ 8.12+ ಕೋಟಿ ಮರಗಳನ್ನು ನೆಡಲಾಗಿದೆ
  • 70 ನದಿಗಳು ಮತ್ತು ಅದರ ಉಪನದಿಗಳನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ

icon

ವ್ಯಾಪ್ತಿ

  • 18 ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಸ್ಥಾಪಿಸಲಾಗಿದೆ
  • 22 ಲಕ್ಷ ರೈತರಿಗೆ ನೈಸರ್ಗಿಕ ಕೃಷಿಯಲ್ಲಿ ತರಬೇತಿ ನೀಡಲಾಗಿದೆ

ಅವಲೋಕನ

ನಮ್ಮ ನೈಸರ್ಗಿಕ ಸಂಪನ್ಮೂಲಗಳು ವಿಪರೀತವಾಗಿ ಕಲುಷಿತಗೊಳ್ಳುತ್ತಿವೆ. ನಮಗೆ ಶುದ್ಧ ಕುಡಿಯುವ ನೀರು, ರಾಸಾಯನಿಕ ಮುಕ್ತ ಉತ್ಪನ್ನಗಳು ಮತ್ತು ಶುದ್ಧ ಗಾಳಿಯ ಪ್ರವೇಶದ ಕೊರತೆ ಎಷ್ಟಿದೆ. ಪರಿಸರದ ಅವನತಿ ನಮಗೆ ಕೆಟ್ಟದ್ದಲ್ಲ, ಆರ್ಥಿಕತೆಯ ಮೇಲೂ ಕೆಟ್ಟದು. ಅಂದಾಜಿನ ಪ್ರಕಾರ ಪರಿಸರದ ಅವನತಿಯು ಭಾರತಕ್ಕೆ ವರ್ಷಕ್ಕೆ $80 ಶತಕೋಟಿ ವೆಚ್ಚವಾಗುತ್ತದೆ, ಅದರ GDP ಯ ಸರಿಸುಮಾರು 6%.

ನಾವು ಈ ಪರಿಸ್ಥಿತಿಯನ್ನು ಬದಲಾಯಿಸಲು ಸಾಕಷ್ಟು ಪರಿಶ್ರಮ ಪಡುತ್ತಿದ್ದೇವೆ. ಪೂಜ್ಯ ಶ್ರೀ ಶ್ರೀ ರವಿಶಂಕರ್ ಗುರುದೇವರಿಂದ ಪ್ರೇರಣೆಗೊಂಡು , ಪ್ರಪಂಚದಾದ್ಯಂತದವೂ ಸಾಕಷ್ಟು ಸಂಖ್ಯೆಯಲ್ಲಿ ಸ್ವಯಂಸೇವಕರು ಒಟ್ಟಾಗಿದ್ದಾರೆ, ಹಾಗೂ ಬೃಹತ್ ಪ್ರಮಾಣದಲ್ಲಿ ಪರಿಸರದ ಬಿಕ್ಕಟ್ಟುಗಳನ್ನು ಎದುರಿಸಲು ಹಲವಾರು ಯೋಜನೆಗಳನ್ನು ಪ್ರಾರಂಭಿಸಿ, ಕಾರ್ಯಗತಗೊಳಿಸಿದ್ದಾರೆ. ಇವುಗಳಲ್ಲಿ, “ಮಿಷನ್ ಗ್ರೀನ್ ಅರ್ತ್”ಎನ್ನುವ ಯೋಜನೆಯ ಅಡಿಯಲ್ಲಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಮರಗಳನ್ನು ನೆಟ್ಟಿದ್ದಾರೆ; ಒಣಗಿದ ನದಿಗಳನ್ನು ಪುನರುಜ್ಜೀವನಗೊಳಿಸಿದ್ದಾರೆ; ಕಲುಷಿತ ನದಿಗಳ ಶುದ್ಧೀಕರಣ ಕ್ರಿಯೆಯನ್ನು ಕೈಗೊಳ್ಳಲಾಗಿದೆ, ದೇವಾಲಯದ ತ್ಯಾಜ್ಯ ನಿರ್ವಹಣೆ ಮತ್ತು ಮಣ್ಣಿನ ಗುಣಮಟ್ಟವನ್ನು ಕಾಪಾಡುವ ನೈಸರ್ಗಿಕ ಕೃಷಿಗಳೂ ಈ ಯೋಜನೆಯಲ್ಲಿ ಸೇರಿಕೊಂಡಿವೆ . ಹೆಚ್ಚಾಗಿ ನಮ್ಮ ಯೋಜನೆಗಳು ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಮತ್ತು ಇದರ ಮೂಲಕ ಗ್ರಾಮೀಣ ಜನರಿಗೆ ಜೀವನೋಪಾಯವನ್ನು ಭದ್ರಪಡಿಸುವ ಸುತ್ತಲೂ ಸುತ್ತುತ್ತಿವೆ.

ನಮ್ಮ ರಾಷ್ಟ್ರದಲ್ಲಿ ಮುಂಬರುವ ನೀರಿನ ಬಿಕ್ಕಟ್ಟನ್ನು ಎದುರಿಸಲು 70 ನದಿಗಳನ್ನು ಮತ್ತು ಅವುಗಳ ಉಪನದಿಗಳನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ.

ನಾವು ಈ ಜಗತ್ತಿನ ಪ್ರಜೆಗಳಾಗಿದ್ದು, ನಮ್ಮಪರಿಸರವನ್ನು ರಕ್ಷಿಸಬೇಕಾದುದು - ನಮ್ಮ ಮೊದಲ ಮತ್ತು ಅಗ್ರಗಣ್ಯ ಕರ್ತವ್ಯವಾಗಿದೆ. ನಾವು ಪರಿಸರದ ಬಗ್ಗೆ ಕಾಳಜಿ ವಹಿಸಿದರೆ, ಅದು ನಮ್ಮ ಬಗ್ಗೆ ಕಾಳಜಿ ವಹಿಸುತ್ತದೆ ಮತ್ತು ನಮಗೆ ಆರೋಗ್ಯ, ಸಂಮೃದ್ಧಿ ಮತ್ತು ಸಂತೋಷಗಳನ್ನು ನೀಡುತ್ತದೆ.

- ಗುರುದೇವ ಶ್ರೀ ಶ್ರೀ ರವಿಶಂಕರ್

ಪರಿಣಾಮ

8.1 ಕೋಟಿ ಮರಗಳನ್ನು

ವಿಶ್ವಾದ್ಯಂತ ನೆಡಲಾಗಿದೆ

22 ಲಕ್ಷ ರೈತರಿಗೆ

ನೈಸರ್ಗಿಕ ಕೃಷಿಯಲ್ಲಿ ತರಬೇತಿ ನೀಡಲಾಗಿದೆ

70 ನದಿಗಳು

ಅದರ ಉಪನದಿಗಳನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ

512 ಟನ್‌ ಕಸ

ಸ್ವಚ್ಛ ಯಮುನಾ ಅಭಿಯಾನದ ವೇಳೆ ತೆಗೆಯಲಾಗಿದೆ

43,980 ಸ್ವಚ್ಛತಾ ಡ್ರೈವ್‌ಗಳು

ಯಶಸ್ವಿಯಾಗಿ ನಡೆಸಲಾಯಿತು

18 ತ್ಯಾಜ್ಯ ನಿರ್ವಹಣಾ ಘಟಕಗಳನ್ನು

ಮಹತ್ವದ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ

11,600 ಕೆಜಿ

ಎಲ್ಲಾ ಸ್ಥಾವರಗಳ ದೈನಂದಿನ ತ್ಯಾಜ್ಯ ಸಂಸ್ಕರಣಾ ಸಾಮರ್ಥ್ಯ

ನಿಮ್ಮ ಬೆಂಬಲದಿಂದ ನಾವು ಇನ್ನೂ ಹೆಚ್ಚಿನದನ್ನು ಸಾಧಿಸಬಹುದು

ಸಾಮಾಜಿಕ ಉಪಕ್ರಮಗಳ ಬಗ್ಗೆ ತೆಗೆದುಕೊಂಡ ಬಹುಮುಖಿ ವಿಧಾನಗಳು ಅನೇಕ ಜೀವಗಳನ್ನು ಉಳಿಸಿವೆ, ಅನೇಕ ನಗುಮೊಗಗಳನ್ನು ಬೆಳಗಿಸಿವೆ ಮತ್ತು ಎಷ್ಟೋ ಸಮುದಾಯಗಳಿಗೆ ಪ್ರಗತಿಯನ್ನು ಸಾಧಿಸಲು ಸಹಕಾರಿಯಾಗಿವೆ. ಪ್ರತಿಯೊಂದು ಸೇವಾ ಕಾರ್ಯದ ತುಣುಕನ್ನು ಕೂಡಾ, ಸಮರ್ಪಣಾ ಭಾವದೊಂದಿಗೆ ವಿಶ್ಲೇಷಣೆಯನ್ನು ನಡೆಸಿ, ಮಾನವೀಯತೆಯನ್ನು ಮಂಚೂಣಿಯಲ್ಲಿ ಇರಿಸಿಕೊಂಡು, ಚಿಂತನಾಶೀಲವಾದ ಕಾಳಜಿಯೊಂದಿಗೆ ರಚಿಸಲಾಗಿದೆ.