
ಹ್ಯಾಪಿನೆಸ್ ಪ್ರೊಗ್ರಾಮ್
ಜಗತ್ತಿನ ಅತ್ಯಂತ ಶಕ್ತಿಶಾಲಿಯಾದ ಉಸಿರಾಟದ - ಪ್ರಕ್ರಿಯೆಯಾದ “ಸುದರ್ಶನ ಕ್ರಿಯೆ” ಯನ್ನು ಕಲಿಯಿರಿ. ಪ್ರಪಂಚದಾದ್ಯಂತ 4.5 ಕೋಟಿಗೂ ಹೆಚ್ಚು ಜನರು ಇದನ್ನು ಅಭ್ಯಾಸ ಮಾಡುತ್ತಿದ್ದಾರೆ.
ಒತ್ತಡವನ್ನು ನಿವಾರಿಸುತ್ತದೆ • ಸಂಬಂಧಗಳಲ್ಲಿ ಸಾಮರಸ್ಯವನ್ನು ತರುತ್ತದೆ • ರೋಗನಿರೋಧಕ ಶಕ್ತಿಯು ವರ್ಧಿಸುತ್ತದೆ
*ನಿಮ್ಮ ದೇಣಿಗೆಯು ನಿಮಗೂ ಹಾಗೆಯೇ ಆರ್ಟ್ ಆಫ಼್ ಲಿವಿಂಗ್ ನ ಸಾಮಾಜಿಕ ಯೋಜನೆಗಳಿಗೂ ಸಹಕಾರಿ.
ನೋಂದಾಯಿಸಿಈ ಕಾರ್ಯಕ್ರಮದಿಂದಾಗುವ ಪ್ರಯೋಜನಗಳು ಏನು?

ಮನಶ್ಶಾಂತಿಯ ವೃದ್ಧಿ
ಮನಸ್ಸನ್ನು ಪ್ರಶಾಂತವಾಗಿಸುವ, ನಿಮ್ಮ ದಿನನಿತ್ಯದ ಜೀವನದಲ್ಲಿ ಹೆಚ್ಚು ಶಾಂತಿ ಮತ್ತು ಸಂತೋಷವನ್ನು ತರುವಂತಹ ಪರಿಣಾಮಕಾರಿಯಾದ ಪ್ರಕ್ರಿಯೆಗಳ ಕಲಿಕೆ.

ಚೈತನ್ಯ ಶಕ್ತಿಯ ಹೆಚ್ಚಳ
ದಣಿವನ್ನು ನಿವಾರಿಸಿ, ಹೆಚ್ಚಿನ ಶಕ್ತಿಯ ಮಟ್ಟವನ್ನು ಅನುಭವ. ಆ ದಿನದಂದು ನೀವು ಮಾಡಲು ಹೊರಟಿರುವ ಎಲ್ಲಾ ಕಾರ್ಯಗಳನ್ನೂ ಮಾಡಿ ಮುಗಿಸುತ್ತೀರಿ.

ಒತ್ತಡ - ಆತಂಕದ ನಿವಾರಣೆ
ಒತ್ತಡವನ್ನು ಕಡಿಮೆ ಮಾಡುವಂತಹ, ಆತಂಕವನ್ನು ನಿವಾರಿಸುವಂತಹ, ಕಠಿಣ ಪರಿಸ್ಥಿತಿಯ ನಡುವೆಯೂ ವಿಶ್ರಮಿಸಬಹುದಾದಂತಹ, ಸಂಶೋಧನೆಗಳಿಂದ ಸಿದ್ಧವಾಗಿರುವ ಪ್ರಕ್ರಿಯೆಗಳ ಕಲಿಕೆ.

ನಿಮ್ಮ ಮನಸ್ಸಿನ ಮೇಲೆ ಹತೋಟಿ
ಆಧುನಿಕ ಜೀವನದಲ್ಲಿನ ಏರಿಳಿತಗಳನ್ನು ನಿಭಾಯಿಸಲು, ನಮ್ಮ ಪ್ರಾಚೀನ ವಿಧಾನಗಳನ್ನು ಈ ಕಾರ್ಯಕ್ರಮದಲ್ಲಿ ಹೇಳಿಕೊಡಲಾಗುತ್ತದೆ.
ಜೀವನ ಪರಿವರ್ತನೆಯ ಅನುಭವ
ಸುದರ್ಶನ ಕ್ರಿಯೆಯ ಬಗ್ಗೆ ವಿಜ್ಞಾನವು ಏನು ಹೇಳುತ್ತದೆ?
ಸುದರ್ಶನಕ್ರಿಯೆಯನ್ನು ಕುರಿತು ಈವರೆಗೂ 100ಕ್ಕಿಂತಲೂ ಹೆಚ್ಚು ಸ್ವತಂತ್ರ ಸಂಶೋಧನೆಗಳನ್ನು ಮಾಡಲಾಗಿದ್ದು, ಇವುಗಳನ್ನು ಜಗತ್ತಿನ ಎಲ್ಲಾ ಪ್ರಸಿದ್ಧವಾದ ಜರ್ನಲ್ ಗಳಲ್ಲಿ ಪ್ರಕಟವಾಗಿವೆ.
▴ 33%
6 ವಾರಗಳಲ್ಲಿ ಹೆಚ್ಚುತ್ತದೆ
ರೋಗನಿರೋಧಕ ಶಕ್ತಿ
▴ 57%
6 ವಾರಗಳಲ್ಲಿ ಕಡಿಮೆಯಾಗುತ್ತದೆ
ಒತ್ತಡ ಸೃಷ್ಟಿಸುವ ಹಾರ್ಮೋನುಗಳು
▴ 21%
1 ವಾರದಲ್ಲಿ ಹೆಚ್ಚುತ್ತದೆ
ಜೀವನದಲ್ಲಿ ತೃಪ್ತಿ
ಜೀವನವನ್ನೇ ಪರಿವರ್ತಿಸುತ್ತದೆ

ಸುದರ್ಶನ ಕ್ರಿಯೆಯು ಇದು ಜನರಲ್ಲಿರುವ ಆತಂಕವನ್ನು 44 ಶೇಕಡಾದಷ್ಟು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ.

ಸುದರ್ಶನ ಕ್ರಿಯೆಯು ನಮ್ಮ ಶರೀರದಲ್ಲಿ, ಸಾಮರಸ್ಯದೊಂದಿಗೆ ಸೌಹಾರ್ದತೆಯನ್ನು ತರುವಲ್ಲಿ ಸಹಕಾರಿಯಾಗಿದೆ.

ಸಂಸ್ಥಾಪಕರು
ಗುರುದೇವ ಶ್ರೀ ಶ್ರೀ ರವಿಶಂಕರ್
ಗುರುದೇವ್ ಶ್ರೀ ಶ್ರೀ ರವಿಶಂಕರ್, ಇವರು ಜಾಗತಿಕ ಮಾನವತಾವಾದಿ, ಆಧ್ಯಾತ್ಮಿಕ ನಾಯಕರು ಮತ್ತು ಶಾಂತಿಯ ರಾಯಭಾರಿ, ಎಂಬುದಾಗಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇವರು ಒತ್ತಡ-ಮುಕ್ತ ಹಾಗೂ ಹಿಂಸಾ-ಮುಕ್ತ ಸಮಾಜದ ನಿರ್ಮಾಣಕ್ಕಾಗಿ, ವಿಶ್ವದಾದ್ಯಂತವೂ, ಅಭೂತ ಪೂರ್ಣವಾದ ಚಳುವಳಿಯನ್ನು ಮುನ್ನಡೆಸಿದ್ದಾರೆ.
ಇನ್ನಷ್ಟು ತಿಳಿಯಿರಿನಾನು ಸೇರಬೇಕೆಂದಿದ್ದೇನೆ ಆದರೆ....
ಅಡ್ಡ-ಪರಿಣಾಮಗಳೇನಾದರೂ ಇವೆಯೆ?
ಇದರ ಒಂದೇ ಒಂದು ಅಡ್ಡ-ಪರಿಣಾಮವೆಂದರೆ, ಎಂದಿಗೂ ಮಾಸದ ಮುಗುಳ್ನಗೆ! ಸುದರ್ಶನ ಕ್ರಿಯೆಯನ್ನು ಜಾಗತಿಕವಾಗಿ, ಪ್ರತಿನಿತ್ಯ ಅನೇಕ ಮಿಲಿಯಾಂತರ ಜನರು ಅಭ್ಯಾಸ ಮಾಡುತ್ತಾರೆ ಮತ್ತು ಅದರಿಂದ ಉತ್ತಮ ಆರೋಗ್ಯವನ್ನು ಪಡೆದುಕೊಂಡಿದ್ದಾರೆ.
ನಮ್ಮ ಪ್ರಕ್ರಿಯೆಗಳು ಅಭ್ಯಾಸ ಮಾಡಲು ಬಲು ಸುರಕ್ಷಿತವಾದವು. ನಿಮಗೆ ಆಸ್ತಮ, ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಬೆನ್ನು ನೋವಿನ ಸಮಸ್ಯೆಗಳಿದ್ದಲ್ಲಿ, ಕಾರ್ಯಕ್ರಮದ ಸಮಯದಲ್ಲಿ ನಿಮಗೆ ಪ್ರತ್ಯೇಕವಾದ ಮಾರ್ಗದರ್ಶನವನ್ನು ನೀಡಲಾಗುತ್ತದೆ.
ಈ ಅಭ್ಯಾಸದಿಂದ ನನ್ನ ಆರೋಗ್ಯವು ಸುಧಾರಿಸುತ್ತದೆಯೆ?
ಹೌದು, ಖಂಡಿತವಾಗಿಯು! ಸುದರ್ಶನ ಕ್ರಿಯೆಯ ನಿತ್ಯಾಭ್ಯಾಸದಿಂದ ನಿದ್ದೆಯ ಗುಣಮಟ್ಟ ಸುಧಾರಿಸುತ್ತದೆ, ರೋಗನಿರೋಧಕ ಶಕ್ತಿಯು ವರ್ಧಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ, ಖಿನ್ನತೆಯ ಮಟ್ಟವೂ ಕುಗ್ಗುತ್ತದೆ. ಈ ಕಾರ್ಯಕ್ರಮದಿಂದ ಲಾಭ ಪಡೆದವರ ಹೇಳಿಕೆಗಳನ್ನು ನೀವು ಓದಬೇಕಷ್ಟೆ. ನಿಮಗೇನಾದರೂ ಆರೋಗ್ಯದ ಸಮಸ್ಯೆಗಳಿದ್ದರೆ, ನಿಮ್ಮ ಶಿಕ್ಷಕರಿಗೆ ಮೊದಲೇ ತಿಳಿಸಿ. ಇದರಿಂದ ನಿಮಗೆ ಸೂಕ್ತವಾದಂತಹ, ಉತ್ತಮವಾದ ಅನುಭವವು ಸಿಗುವಂತೆ ಶಿಕ್ಷಕರು ಮಾಡಬಹುದು.
ದೇಣಿಗೆಯನ್ನು ಏಕೆ ಪಡೆಯುತ್ತೀರಿ?
ಮೊದಲನೆಯ ಕಾರಣವೆಂದರೆ, ಈ ಕಾರ್ಯಕ್ರಮಕ್ಕಾಗಿ ನಿಮ್ಮ ಸಮಯವನ್ನು ಮೀಸಲಿಡಲು ಬದ್ದತೆ.ಎರಡನೆಯ ಕಾರಣವೆಂದರೆ, ನಿಮಗೆ ಜೀವನಕ್ಕೆ ಅವಶ್ಯಕವಾದ ಕುಶಲತೆಗಳನ್ನು ಹೇಳಿಕೊಡುವುದರೊಡನೆ ನಿಮ್ಮ ದೇಣೆಗೆಯು ಭಾರತದಲ್ಲಿ ನಡೆಯುವ ಸೇವಾ ಕಾರ್ಯಗಳಿಗೆ, ಉದಾಹರಣೆಗೆ, 84,689+ ಬುಡಕಟ್ಟು ಮಕ್ಕಳ ಶಿಕ್ಷಣ, 70 ನದಿಗಳ ಪುನಶ್ಚೇತನ ಕಾರ್ಯ, ಜೀವನೋಪಾಯದ ಕುಶಲತೆಗಳನ್ನು ಕಲಿತ 3,10,561 ಗ್ರಾಮೀಣ ಯುವಕರ ಸಬಲೀಕರಣ, 758 ಗ್ರಾಮಗಳನ್ನು ಸೌರದೀಪಗಳಿಂದ ವಿದ್ಯುದೀಕರಣಗೊಳಿಸುವಿಕೆಗೆ ವಿನಿಯೋಗವಾಗುತ್ತದೆ.
ನನಗೆ ಒತ್ತಡವಿಲ್ಲ. ಆದರೂ ಈ ಕಾರ್ಯಕ್ರಮವನ್ನು ನಾನೇಕೆ ಮಾಡಬೇಕು?
ನಿಮಗೆ ಒತ್ತಡವಿಲ್ಲದಿದ್ದರೆ ಅದು ಬಹಳ ಅದ್ಭುತವಾದ ವಿಷಯ! ನೀವು ಉತ್ತಮವಾದ ಜೀವನವನ್ನೇ ನಡೆಸುತ್ತಿರುವಿರಿ ಎಂದಾಯಿತು. ಆದರೆ ಹೀಗೂ ಆಲೋಚಿಸಿ ನೋಡಿ. ಹಣವೆಲ್ಲಾ ಖರ್ಚಾದ ನಂತರ ಹಣವನ್ನು ಕೂಡಿಡಬೇಕೆಂದು ನಿರ್ಧರಿಸುವಿರೇ? ಅಥವಾ ಅನಾರೋಗ್ಯದಿಂದ ಪೀಡಿತರಾದ ನಂತರವೇ ವ್ಯಾಯಾಮ ಮಾಡಬೇಕೆಂದು ನಿರ್ಧರಿಸುತ್ತೀರೇ? ಇಲ್ಲ. ಅಲ್ಲವೆ? ಆದ್ದರಿಂದ, ಭವಿಷ್ಯದಲ್ಲಿ ನಿಮಗೆ ಬೇಕಾಗುವ ಬಲವನ್ನು, ಸಹಿಷ್ಣುತೆಯನ್ನು ಈಗಿಂದಲೇ ಬೆಳೆಸಿಕೊಳ್ಳಬಹುದಲ್ಲವೆ? ಎಲ್ಲವೂ ನಿಮ್ಮ ನಿರ್ಧಾರದ ಮೇಲೆ ಅವಲಂಬಿಸಿದೆ. ನೀವು ಒತ್ತಡದಿಂದ ತುಂಬಿ ಹೋಗುವವರೆಗೂ ಕಾಯಬಹುದು. ಆಗಲೂ ನಿಮ್ಮ ಸಹಾಯಕ್ಕಾಗಿ ಈ ಕಾರ್ಯಾಗಾರವು ನಿಮಗಾಗಿ ಕಾಯುತ್ತಿರುತ್ತದೆ!