ನೈಸರ್ಗಿಕವಾಗಿ ಕೃಷಿಯನ್ನು ಮಾಡುವ ತಂತ್ರಗಳೊಂದಿಗೆ ರೈತರ ಸಬಲೀಕರಣ
ಮಣ್ಣಿನ ಗುಣಮಟ್ಟವನ್ನು ಕಾಪಾಡುವುದು, ಜೀವವೈವಿಧ್ಯವನ್ನು ರಕ್ಷಿಸುವುದು ಮತ್ತು ಭಾರತದ ರೈತರ ಜೀವನವನ್ನು ಉನ್ನತವಾದ ಮಟ್ಟಕ್ಕೆ ಏರುವಂತೆ ಮಾಡುವುದು.

ಕಾರ್ಯತಂತ್ರ
ನೈಸರ್ಗಿಕ ಕೃಷಿ ತಂತ್ರಗಳಲ್ಲಿ ರೈತರಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡುವುದು

ಪರಿಣಾಮ
ಕಡಿಮೆ ವೆಚ್ಚದಲ್ಲಿ ಹೆಚ್ಚು ಆದಾಯ ಉತ್ಪಾದನೆ

ವ್ಯಾಪ್ತಿ
22 ಲಕ್ಷಕ್ಕೂ ಹೆಚ್ಚು ರೈತರಿಗೆ ನೈಸರ್ಗಿಕ ಕೃಷಿ ತಂತ್ರಗಳಲ್ಲಿ ತರಬೇತಿ ನೀಡಲಾಗಿದೆ.
ಅವಲೋಕನ
ಸಾಲ, ಬೆಳೆಯ ವೈಫಲ್ಯ ಮತ್ತು ಸಾಮಾಜಿಕ ಒತ್ತಡಗಳು ಭಾರತದ ಅನ್ನದಾತರ ಬಹು ದೊಡ್ಡ ಸಮಸ್ಯೆಗಳಾಗಿವೆ. ರೈತರು ದುಬಾರಿ ರಾಸಾಯನಿಕ ಗೊಬ್ಬರ, ಕೀಟನಾಶಕ ಮತ್ತು ಬೀಜಗಳನ್ನು ಖರೀದಿಸಲು ಬ್ಯಾಂಕುಗಳಿಂದ ಸಾಲವನ್ನು ತೆಗೆದುಕೊಳ್ಳುತ್ತಾರೆ. ಒಂದು ವೇಳೆ ಮಳೆಯು ಕೈಕೊಟ್ಟಿತೆಂದರೆ,ರೈತರು, ಬೆಳೆಯೂ ಇಲ್ಲದೆ , ಸಾಲ ಮಾಡಿ ಪಡೆದುಕೊಂಡ ಹಣವನ್ನೂ ಕಳೆದುಕೊಂಡು ಸಾಲ ತೀರಿಸಲು ಯಾವುದೇ ವಿಧದ ದಾರಿಯನ್ನು ಕಾಣದೆ ಪರದಾಡುತ್ತಾರೆ.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಆರಂಭಿಸಿದ " ಶ್ರೀ ಶ್ರೀ ನ್ಯಾಚುರಲ್ ಫಾರ್ಮಿಂಗ್ ಪ್ರಾಜೆಕ್ಟ್ " ಯೋಜನೆಯು ಭಾರತದಾದ್ಯಂತ ನೈಸರ್ಗಿಕವಾಗಿ ಕೃಷಿ ಮಾಡುವ ತಂತ್ರಗಳಿಗೆ ಉತ್ತೇಜನವನ್ನು ಕೊಡುತ್ತಿದೆ. ಇದು ರೈತರಿಗೆ ಕಡಿಮೆ ವೆಚ್ಚ, ಸುಧಾರಿತ ಮಟ್ಟದ ಉತ್ಪಾದನೆ ಮತ್ತು ಲಾಭದ ಭರವಸೆಯನ್ನು ನೀಡುತ್ತದೆ.
ಪ್ರಸ್ತುತ ರಾಸಾಯನಿಕ ಗೊಬ್ಬರ, ಕೀಟನಾಶಕ ಮತ್ತು ಹೈಬ್ರಿಡ್ ಬೀಜಗಳ ಖರೀದಿಗೆ ರೈತರು ಅತ್ಯಂತ ದೊಡ್ಡ ಮೊತ್ತದ ಸಾಲವನ್ನು ಮಾಡಬೇಕಾಗುತ್ತದೆ ಮಾತ್ರವಲ್ಲದೆ ಈ ರಸಾಯನಗಳು ನೀರನ್ನು ಕಲುಷಿತಗೊಳಿಸಿ ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ಖಾಲಿ ಮಾಡಿ ಪರಿಸರ ವ್ಯವಸ್ಥೆಯನ್ನು ಹಾನಿಗೊಳಿಸುತ್ತವೆ. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ನೈಸರ್ಗಿಕವಾದ ರೀತಿಯಲ್ಲಿ ಹೇಳಿಕೊಡುವಂತಹ- ಕೃಷಿ ಮಾಡುವ ತಂತ್ರಗಳು ಸ್ವಾಭಾವಿಕವಾಗಿ ಪರಿಸರ ಸ್ನೇಹಿಯಾಗಿದ್ದು ,ಸುಸ್ಥಿರವಾಗಿರುತ್ತವೆ. ಅಷ್ಟೇ ಅಲ್ಲದೆ ಇವುಗಳನ್ನು ಕಡಿಮೆ ಹೂಡಿಕೆಯಲ್ಲಿ ಮಾಡಬಹುದಾಗಿದೆ. ಪ್ರಾರಂಭದ ದಿನಗಳಿಂದಲೂ ಭಾರತದ ಆರ್ಥಿಕತೆಯು ಪ್ರಾಥಮಿಕವಾಗಿ ಕೃಷಿ ಪ್ರಧಾನವಾಗಿದ್ದು , ಆಗಿನಿಂದಲೇ ಈ ತಂತ್ರಗಳನ್ನು ಪ್ರಧಾನವಾಗಿ ಬಳಸಲಾಗುತ್ತಿತ್ತು. ಆದರೆ ಅರವತ್ತರ ದಶಕದಲ್ಲಿ ದೇಶದಲ್ಲಿ ನಡೆದ ಹಸಿರು ಕ್ರಾಂತಿಯು ರಸಗೊಬ್ಬರ ಮತ್ತು ಹೈಬ್ರಿಡ್ ಬೀಜಗಳ ಅತಿರೇಕದ ಬಳಕೆಯನ್ನು ಪ್ರೇರೇಪಿಸಿತು. ಇದು ಭಾರತೀಯ ರೈತರನ್ನು ಭಾರೀ ಸಾಲದ ಅಡಿಯಲ್ಲಿ ಹೂತುಹಾಕಿ ಪರಿಸರ ವ್ಯವಸ್ಥೆಯ ಮೇಲೆ ಋಣಾತ್ಮಕವಾದ ಪರಿಣಾಮವನ್ನು ಬೀರಿತು. ರೈತರಿಗೆ ಸಹಾಯ ಮಾಡುವ, ಮಣ್ಣಿನ ಗುಣಮಟ್ಟವನ್ನು ಕಾಪಾಡುವ ಮತ್ತು ಪರಿಸರ ವ್ಯವಸ್ಥೆಯನ್ನು ಉಳಿಸುವ ಮತ್ತೊಂದು ಕೃಷಿಯ ಕ್ರಾಂತಿಯನ್ನು ನಡೆಸಲು ಪ್ರಸ್ತುತ ಈಗಿನ ಕಾಲವು ಕರೆ ನೀಡುತ್ತಿದೆ. ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ಖಾಲಿ ಮಾಡಿ ಪರಿಸರ ವ್ಯವಸ್ಥೆಯನ್ನು ಹಾನಿಗೊಳಿಸುತ್ತವೆ. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ನೈಸರ್ಗಿಕ ಕೃಷಿ ತಂತ್ರಗಳು ಸ್ವಾಭಾವಿಕವಾಗಿ ಪರಿಸರ ಸ್ನೇಹಿ ಮತ್ತು ಸುಸ್ಥಿರವಾಗಿರುವುದರೊಂದಿಗೆ ಕಡಿಮೆ ಹೂಡಿಕೆಯಲ್ಲಿ ಮಾಡಬಹುದಾಗಿವೆ.
ಶ್ರೀ ಶ್ರೀ ನೈಸರ್ಗಿಕ ಕೃಷಿ ಯೋಜನೆಯು ಈ ಕ್ರಾಂತಿಯನ್ನು ಪ್ರಾರಂಭಿಸಿದೆ.
ನಾನು ಒಂದೂವರೆ ಎಕರೆ ಜಾಗದಲ್ಲಿ ,ಒಂದು ತಿಂಗಳಲ್ಲಿ,ಸುಮಾರು 16 ಟನ್ಗಳಷ್ಟು ಹಸಿರು ಕಾಯಿಮೆಣಸನ್ನು ಕೊಯ್ಲು ಮಾಡಿ ಬೆಳೆಸಿದ್ದೇನೆ. ನಮ್ಮ ಇಡೀ ಹಳ್ಳಿಯು ಬರಗಾಲಕ್ಕೆ ತುತ್ತಾದಾಗ ಎಲ್ಲಾ ರೈತರು ಸರಕಾರದಿಂದ ಪರಿಹಾರ ಧನವನ್ನು ಪಡೆದರು. ಆದರೆ ಪ್ರಾರಂಭದಿಂದಲೂ ಯಾವುದೇ ರೀತಿಯ ಅಸಲನ್ನು ಹಾಕದಿದ್ದರೂ,…

ಎಂ ಬಾಷಾ
ಲಕ್ಷ್ಮಪುರಂ, ಕುರ್ನೂಲ್, ಆಂಧ್ರಪ್ರದೇಶ
ಕಾರ್ಯತಂತ್ರ
ರಾಷ್ಟ್ರದಾದ್ಯಂತವೂ ನಮ್ಮ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಯುವಾಚಾರ್ಯರು, ಕೃಷಿ ತರಬೇತುದಾರರು ಮತ್ತು ಕೆಲವು ಸರ್ಕಾರಿ ಅಧಿಕಾರಿಗಳ ಜೊತೆಯಲ್ಲಿ ಸೇರಿಕೊಂಡು ಮಾಡುತ್ತಿರುವ ಬಹುಮುಖೀ ಪ್ರಯತ್ನಗಳು, ರೈತರಿಗೆ ಹಲವಾರು ವಿಧಗಳಲ್ಲಿ ಸಹಾಯ ಮಾಡುತ್ತಿವೆ. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಎಲ್ಲಾ ರಾಜ್ಯಗಳಲ್ಲಿ ನೈಸರ್ಗಿಕ ಕೃಷಿಯನ್ನು ಕುರಿತು ತರಬೇತಿ ಕೊಡುವ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಈ ತರಬೇತುದಾರರು, ಸ್ಥಳೀಯ ಬೀಜಗಳು, ದೇಶೀಯ ಹಸುಗಳು, ನೈಸರ್ಗಿಕ ರಸಗೊಬ್ಬರಗಳು ಮತ್ತು ಕೀಟನಾಶಕಗಳ ಬಳಕೆಯ ಬಗ್ಗೆ ಸೈದ್ಧಾಂತಿಕ ಮಾಹಿತಿಗಳನ್ನು ನೀಡುವುದರೊಂದಿಗೆ, ಪ್ರಾಯೋಗಿಕ ಪ್ರದರ್ಶನವನ್ನೂ ಸಹ ಮಾಡಿ ತೋರಿಸುತ್ತಿದ್ದಾರೆ.
ನೈಸರ್ಗಿಕಕೃಷಿ ತರಬೇತಿ ಕಾರ್ಯಕ್ರಮವು ರೈತರಿಗೆ ಈ ಕೆಳಗಿನ ವಿಷಯಗಳಲ್ಲಿ ತರಬೇತಿಯನ್ನು ನೀಡುತ್ತಿದೆ:
- ವಿವಿಧ ಸಾವಯವ ಗೊಬ್ಬರಗಳನ್ನು ತಯಾರಿಸುವ ವಿಧಾನಗಳು.
- ಗೊಬ್ಬರವನ್ನು ಹೊಲದಲ್ಲಿ ಸರಿಯಾಗಿ ಬಳಸುವ ವಿಧಾನ.
- ಹೊಲವನ್ನು ಕಾಪಾಡಿಕೊಳ್ಳುವ ಸಾವಯವ ಮಾರ್ಗಗಳು.
- ಸುಗ್ಗಿಯ ನಂತರದ ಉತ್ಪನ್ನವನ್ನು ನೈಸರ್ಗಿಕವಾಗಿ ನಿರ್ವಹಿಸುವ ವಿಧಾನಗಳು.
ತರಬೇತಿಯು ಪೂರ್ಣವಾದ ನಂತರ, ಆರ್ಟ್ ಆಫ್ ಲಿವಿಂಗ್ ತಂಡವು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳಲು ರೈತರಿಗೆ ಸಹಾಯ ಮಾಡುತ್ತದೆ. ಅಲ್ಲದೇ ರೈತರ ಸಮಸ್ಯೆಗಳಿಗೆ ಸಾಮೂಹಿಕ ಪ್ರಯತ್ನದ ಮೂಲಕ ಪರಿಹಾರವನ್ನು ನೀಡಲು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು "ಕಿಸ್ಸಾನ್ ಮಂಚ್ " ಎಂಬ ವೇದಿಕೆಯನ್ನು ಕೂಡ ಒದಗಿಸಿಕೊಡುತ್ತಿದೆ.
ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ಪಡೆಯಲೆಂದು ನಾವು ಅವರಿಗೆ ನೇರವಾಗಿ ಮಾರುಕಟ್ಟೆಯನ್ನೂ ಸಹ ಒದಗಿಸುತ್ತಿದ್ದೇವೆ.
ಮೂರು ದಿನಗಳ ತರಬೇತಿ
ನೈಸರ್ಗಿಕ ಕೃಷಿಯ
ಮಾರ್ಗದರ್ಶನ
ಸ್ಥಳ ಮತ್ತು ಋತುವಿನ ಆಧಾರದ ಮೇಲೆ ವೈಯಕ್ತಿಕ ಮಾರ್ಗದರ್ಶನ.
ಕೈ ಹಿಡಿಯುವುದು
- ಯುವಾಚಾರ್ಯರು ನೈಸರ್ಗಿಕ ಕೃಷಿಯನ್ನು ಉಳಿಸಿಕೊಳ್ಳಲು ರೈತರಿಗೆ ಅನುವು ಮಾಡಿಕೊಡುತ್ತಾರೆ.
ಕಿಸಾನ್ ಮಂಚ್
ರೈತರು ಭೇಟಿಯಾಗಿ ಸಮಸ್ಯೆಗಳು ಮತ್ತು ವಿಚಾರಗಳನ್ನು ಚರ್ಚಿಸುತ್ತಾರೆ
ನೇರ ಮಾರುಕಟ್ಟೆ
ಮಧ್ಯವರ್ತಿಗಳನ್ನು ತೊಡೆದುಹಾಕುವುದು ಮತ್ತು ರೈತರು ತಮ್ಮ ಉತ್ಪನ್ನಗಳನ್ನು ಉತ್ತಮ ದರದಲ್ಲಿ ಮಾರಾಟ ಮಾಡುವುದನ್ನು ಖಾತ್ರಿಪಡಿಸುವುದು
ಕೃಷಿ ಮನುಷ್ಯನ ಅಸ್ತಿತ್ವದ ಬೆನ್ನೆಲುಬು. ಯಾವುದೇ ನಾಗರಿಕತೆಯ ಏಳಿಗೆಗೆ ಕೃಷಿಯು ಆರೋಗ್ಯಕರ ಮತ್ತು ಸುಸ್ಥಿರವಾಗಿರಬೇಕು. ನಮ್ಮ ಪ್ರಾಥಮಿಕ ಉದ್ಯಮವಾಗಿರುವ ಕೃಷಿಯತ್ತ ನಾವು ಪುನಃ ಗಮನ ಹರಿಸಬೇಕು.
- ಗುರುದೇವ ಶ್ರೀ ಶ್ರೀ ರವಿಶಂಕರ್
ಕ್ರಾಂತಿಯಲ್ಲಿ ಸೇರಿಕೊಳ್ಳಿ
ನಿಮ್ಮೆಲ್ಲರ ಬೆಂಬಲವಿದ್ದರೆ, ನಾವು ಇನ್ನೂ ಹೆಚ್ಚಿನದನ್ನು ಸಾಧಿಸಬಹುದಾಗಿದೆ. ಪರಿಸರಕ್ಕೆ ಸ್ನೇಹದಾಯಕವಾಗಿರುವ ವಿಧಾನಗಳೊಂದಿಗೆ ನಾವು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಇಳುವರಿ ಪಡೆಯಲು ರೈತರಿಗೆ ಸಹಾಯ ಮಾಡಬಹುದು.
ದಾನ ಮಾಡಿ