ಕೈದಿಗಳ ಜೀವನದಲ್ಲಿ ಪರಿವರ್ತನೆಯನ್ನು ತರುವುದು
ಆಘಾತ-ಪರಿಹಾರ, ಆರೈಕೆ ಮತ್ತು ಕೌಶಲ್ಯಗಳನ್ನು ವೃದ್ಧಿಸುವ ತರಬೇತಿಗಳನ್ನು ನೀಡುವುದರೊಂದಿಗೆ ಕೈದಿಗಳಿಗೆ ಪುನರ್ವಸತಿಯನ್ನು ಕಲ್ಪಿಸಿ ಕೊಡಲಾಗಿದೆ.

ಸವಾಲು
ಕೈದಿಗಳು ಹಿಂಸೆಯ ಚಕ್ರದಲ್ಲಿ ಸಿಲುಕಿ ಕೊಂಡಿರುವುದು

ತಂತ್ರ
ಕೋಪ, ಒತ್ತಡ ಮತ್ತು ಹಿಂಸೆಯನ್ನು ಕಡಿಮೆ ಮಾಡಲು ಸಾಬೀತಾಗಿರುವ ತಂತ್ರಗಳೊಂದಿಗೆ ಕೈದಿಗಳನ್ನು ಪರಿವರ್ತಿಸುವುದು

ವ್ಯಾಪ್ತಿ
65 ಕ್ಕೂ ಹೆಚ್ಚು ದೇಶಗಳಲ್ಲಿ ಜಾಗತಿಕ ಉಪಸ್ಥಿತಿಯೊಂದಿಗೆ ವಿಶ್ವದಾದ್ಯಂತ 8 ಲಕ್ಷಕ್ಕೂ ಹೆಚ್ಚು ಕೈದಿಗಳು ಮತ್ತು ಸಿಬ್ಬಂದಿಯನ್ನು ಪರಿವರ್ತಿಸಲಾಗಿದೆ
ಅವಲೋಕನ
ಅಪರಾಧವನ್ನು ಮಾಡಿದ ಪ್ರತಿಯೊಬ್ಬ ವ್ಯಕ್ತಿಯ ಮನೋಭಾವದಲ್ಲಿ ಬದಲಾವಣೆಯನ್ನು ಉಂಟು ಮಾಡ ಬೇಕು ಮತ್ತು ಅವರಿಗೆ ಅರ್ಥಪೂರ್ಣವಾದ ಜೀವನವನ್ನು ಪ್ರಾರಂಭಿಸಲು ಅವಕಾಶವನ್ನು ಕಲ್ಪಿಸಿ ಕೊಡಬೇಕು ಎಂದು ನಾವು ಇಚ್ಛಿಸುತ್ತೇವೆ. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಜೈಲು ಕಾರ್ಯಕ್ರಮವನ್ನು, ಜೈಲುಗಳಲ್ಲಿ ಬಂಧಿಯಾಗಿರುವವರಿಗೆ ಮತ್ತು ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸುವವರಿಗೆ, ಇಬ್ಬರಿಗೂ ಸರಿಹೊಂದುವಂತೆ ಹಾಗೂ ಸಹಕಾರಿಯಾಗುವಂತೆ ನಿಯೋಜಿಸಲಾಗಿದೆ.
ಈ ಕಾರ್ಯಕ್ರಮವು ಒತ್ತಡಗಳನ್ನು ಕಡಿಮೆ ಮಾಡುವ ಕೌಶಲ್ಯಗಳನ್ನು ಕಲಿಸುವ ಮೂಲಕ, ಆಘಾತವನ್ನು ಗುಣಪಡಿಸುವುದಷ್ಟೇ ಅಲ್ಲದೆ, ನಕಾರಾತ್ಮಕ ಭಾವನೆಗಳನ್ನು ಎದುರಿಸುವಂತಹ ಪ್ರಾಯೋಗಿಕ ವಿಧಾನಗಳನ್ನು ಒದಗಿಸುವ ಮೂಲಕ ಅವರೆಲ್ಲರ ಜೀವನದಲ್ಲಿ ಪರಿವರ್ತಿನೆಯನ್ನು ತಂದಿದೆ.
ಹಿಂಸಾಚಾರದ ಇತಿಹಾಸವನ್ನು ಹೊಂದಿರುವ ಕೈದಿಗಳಿಗೆ ಮತ್ತು ಜನರಿಗೆ, ತಾವು ಎಸಗಿದ ಅಪರಾಧಗಳಿಂದಾಗಿ , ಅವರಲ್ಲಿ ಉಂಟಾದ ಆತ್ಮಗ್ಲಾನಿಯಿಂದ ಮತ್ತು ಹಿಂಜರಿಯುವಿಕೆಯಿಂದ ಹೊರಗೆ ಬರಲು, ಈ ಕಾರ್ಯಕ್ರಮವು ಅವರೆಲ್ಲರಿಗೆ ಸಹಾಯ ಮಾಡುತ್ತದೆ.
ಇದಕ್ಕಾಗಿ ನಾವು ಜೈಲಿನಲ್ಲಿರುವ ವಿವಿಧ ಅಧಿಕಾರಿಗಳೊಂದಿಗೆ ಮತ್ತು ಸಶಸ್ತ್ರ ಪಡೆಗಳೊಂದಿಗೆ ಕೆಲಸವನ್ನು ಮಾಡುತ್ತಿದ್ದೇವೆ. ವಿಶ್ವದಾದ್ಯಂತವೂ ಇದುವರೆಗೆ ನಾವು ಸುಮಾರು 8 ಲಕ್ಷಕ್ಕೂ ಹೆಚ್ಚುವರಿ ಕೈದಿಗಳಿಗೆ ಈ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ನಾವು ಸ್ಪರ್ಶಿಸಿದ ಅನೇಕ ಕೈದಿಗಳು ಈಗ ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮಗಳ ಶಿಕ್ಷಕರಾಗಿದ್ದಾರೆ ಮತ್ತು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ನಮ್ಮೊಂದಿಗೆ ಕೆಲಸ ಮಾಡುತ್ತಿದ್ದಾರೆ. ಆಶ್ಚರ್ಯವೆನಿಸುತ್ತಿದ್ದರೂ ಇದು ನೈಜತೆಯಾಗಿದೆ.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯವರು ಕಾರಾಗ್ರಹಗಳಲ್ಲಿ ನಡೆಸುತ್ತಿರುವ ಪ್ರೀಸನ್ ಪ್ರೋಗ್ರಾಮ್ , ಇದು ಅತ್ಯಂತ ಹೃದಯಸ್ಪರ್ಶಿಯಾಗಿದೆ. ಕೈದಿಗಳಿಗೆ ಯಾವುದರ ಅಗತ್ಯವಿದೆಯೋ, ಅದನ್ನೇ ಈ ಶಿಬಿರದಲ್ಲಿ ಕೊಡಲಾಗುತ್ತದೆ. ಕೈದಿಗಳಲ್ಲಿರುವ ಒತ್ತಡಗಳನ್ನು ದೂರ ಮಾಡಿ, ಅವರೆಲ್ಲರ ಭಾವನೆಗಳಿಗೆ ಸಾಂತ್ವನವನ್ನು ಕೊಟ್ಟು, ಮನಸ್ಸಿನಲ್ಲಿ ಶಾಂತಿಯನ್ನು ತರುವುದೇ…

ಡಾ.ಕಿರಣ್ ಬೇಡಿ
ಪಿ ಪಿ ಎಂ ಜಿ, ಪಿ ಎನ್ ಬಿ ಬಿ, ಎಕ್ಸ್ ಡೈರೆಕ್ಟರ್, ಜನರಲ್ ಆಫ್ ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್
ಪ್ರತಿನಿತ್ಯವೂ, ಎಡೆಬಿಡದೆ,ಆರ್ಟ್ ಆಫ್ ಲಿವಿಂಗ್ನವರು ಕಲಿಸಿದ ಕಾರ್ಯಕ್ರಮವನ್ನು ಅಭ್ಯಾಸ ಮಾಡುವುದು ಅತಿ ಸುಲಭ, ಎಂದು ನನಗೆ ಅನಿಸಿದೆ. ಎಲ್ಲಾ ಕೈದಿಗಳಿಗೆ ಹಾಗೂ ಮೇಲಿನ ಆಫೀಸರ್ ಗಳಿಗೆ, ಸುದರ್ಶನ ಕ್ರಿಯೆಯು ಶಾರೀರಿಕ, ಮಾನಸಿಕ , ಆಧ್ಯಾತ್ಮಿಕ ಮತ್ತು ಸಾಮಾಜಿಕ-ಮಟ್ಟಗಳಲ್ಲಿ ಅಭಿವೃದ್ಧಿಯನ್ನು ಸಾಧಿಸಲು, ಅತ್ಯಂತ…

ಫಾರ್ಮರ್ ಡೈರೆಕ್ಟರ್ ಜನರಲ್
ನ್ಯಾಷನಲ್ ಹ್ಯೂಮನ್ ರೈಟ್ಸ್ ಕಮಿಷನ್
ಪ್ರತಿಯೊಬ್ಬ ಅಪರಾಧಿಯ ಒಳಗೂ ಒಬ್ಬ ಬಲಿಪಶು ಸಹಾಯಕ್ಕಾಗಿ ಕೂಗುತ್ತಿರುತ್ತಾನೆ. ನೀವು ಬಲಿಪಶುವನ್ನು ಗುಣಪಡಿಸಿದಾಗ, ಅಪರಾಧಿ ಕಣ್ಮರೆಯಾಗುತ್ತಾನೆ.
- ಗುರುದೇವ ಶ್ರೀ ಶ್ರೀ ರವಿಶಂಕರ್
ಸವಾಲು
ವರ್ಷಗಳ ಬಂಧನವು ಸ್ವ-ಮೌಲ್ಯದ ಹೆಚ್ಚಿನ ನಷ್ಟಕ್ಕೆ ಕಾರಣವಾಗುತ್ತದೆ, ಕೋಪ, ಆತಂಕ ಮತ್ತು ಹತಾಶೆಯ ಪ್ರಜ್ಞೆ ಬೆಳೆಯುತ್ತದೆ. ಹೆಚ್ಚಿನ ಕೈದಿಗಳು ಅಪರಾಧದ ಹಿಂಜರಿತದ ಚಕ್ರದಿಂದ ಹೊರಬರಲು ಎಂದಿಗೂ ಸಾಧ್ಯವಾಗುವುದಿಲ್ಲ ಎಂಬ ದೃಢವಾದ ನಂಬಿಕೆಯನ್ನು ಬೆಳೆಸಿಕೊಳ್ಳುತ್ತಾರೆ.
ಅವರ ಬಿಡುಗಡೆಯ ನಂತರ, ಸಮಾಜದ ಮುಖ್ಯವಾಹಿನಿಯಲ್ಲಿ ಕೈದಿಗಳ ಏಕೀಕರಣವು ಒಂದು ಸವಾಲಾಗಿದೆ ಏಕೆಂದರೆ ಸಮಾಜವು ಅವರನ್ನು ಸ್ವೀಕರಿಸಲು ವಿಫಲವಾಗಿದೆ. ಅಂತೆಯೇ, ಅನೇಕ ಖೈದಿಗಳು ತಮ್ಮ ಬಿಡುಗಡೆಯ ನಂತರ ಅಪರಾಧಕ್ಕೆ ಮರಳುತ್ತಾರೆ, ದುರಾಚಾರದ ಚಕ್ರವನ್ನು ರೂಪಿಸುತ್ತಾರೆ.
ಕಠಿಣ ಪರಿಸ್ಥಿತಿಗಳಲ್ಲಿ ನಿರಂತರ ಕೆಲಸದಿಂದಾಗಿ ಜೈಲು ಸಿಬ್ಬಂದಿಗಳು ಸ್ವತಃ ಅತಿಯಾದ ಕೆಲಸ ಮತ್ತು ಒತ್ತಡದಿಂದಾಗಿ ಕೈದಿಗಳ ವರ್ತನೆಯನ್ನು ಬದಲಾಯಿಸುವುದು ಕಷ್ಟಕರವಾಗಿದೆ.
ಹಿಂಸೆಯ ಚಕ್ರ

ಕಾರ್ಯತಂತ್ರ
ನಮ್ಮ ಜೈಲು ಕಾರ್ಯಕ್ರಮ ಈ ಕೆಳಗಿನವುಗಳನ್ನು ಒಳಗೊಂಡಿದೆ:
ಭಾವನಾತ್ಮಕವಾಗಿ ಕೈದಿಗಳನ್ನು ಗುಣಪಡಿಸುವುದು: ನಮ್ಮ ಜೈಲು ಕಾರ್ಯಕ್ರಮದಲ್ಲಿ ವಿಶೇಷ ಉಸಿರಾಟದ ತಂತ್ರಗಳನ್ನು ನಾವು ಕಲಿಸುತ್ತೇವೆ, ಇದು ಆಘಾತ, ಅಪರಾಧ ಮತ್ತು ಕೋಪದಂತಹ ನಕಾರಾತ್ಮಕ ಭಾವನೆಗಳ ಚಕ್ರದಿಂದ ಹೊರಬರಲು ಸಹಾಯ ಮಾಡುತ್ತದೆ. ನಾವು ಈ ಕಾರ್ಯಕ್ರಮಗಳನ್ನು ನಿಯಮಿತವಾಗಿ ನಡೆಸುತ್ತೇವೆ ಅದು ಅಂತಿಮವಾಗಿ ಕೈದಿಗಳಿಗೆ ಈ ಭಾವನೆಗಳನ್ನು ಜಯಿಸಲು ಸಹಾಯ ಮಾಡುತ್ತದೆ. ಖೈದಿಗಳು ಕೋಪ ಮತ್ತು ಒತ್ತಡವನ್ನು ತೊಡೆದುಹಾಕಿದಾಗ, ಅವರು ಬಿಡುಗಡೆಯಾದ ನಂತರ ಅಪರಾಧಕ್ಕೆ ಮರಳುವುದಕ್ಕಿಂತ ಸಮಾಜಕ್ಕೆ ಕೊಡುಗೆ ನೀಡುವ ಸಾಧ್ಯತೆ ಹೆಚ್ಚು.
ಜೀವನೋಪಾಯವನ್ನು ಒದಗಿಸುವುದು: ನಾವು ಕೈದಿಗಳಿಗೆ ವೃತ್ತಿಪರ ತರಬೇತಿಯನ್ನು ನೀಡುತ್ತೇವೆ ಇದರಿಂದ ಅವರು ಬಿಡುಗಡೆಯಾದ ನಂತರ ಗೌರವಾನ್ವಿತ ವಿಧಾನಗಳ ಮೂಲಕ ಜೀವನೋಪಾಯಕ್ಕೆ ಮರಳಬಹುದು.
ಒತ್ತಡವನ್ನು ನಿವಾರಿಸುವ ಜೈಲು ಸಿಬ್ಬಂದಿ: ನಾವು ಕಾರಾಗೃಹ ಸಿಬ್ಬಂದಿಗೆ ಮತ್ತು ಕಾನೂನು ಜಾರಿ ಸಂಸ್ಥೆಗಳಲ್ಲಿ ಇತರರಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಕಾರ್ಯಕ್ರಮಗಳನ್ನು ನಡೆಸುತ್ತೇವೆ ಮತ್ತು ಅವರಿಗೆ ಒತ್ತಡವನ್ನು ನಿವಾರಿಸಲು ಮತ್ತು ಹೆಚ್ಚು ಪರಿಣಾಮಕಾರಿಯಾಗಿರಲು ಸಹಾಯ ಮಾಡುತ್ತೇವೆ.
ನಮ್ಮ ಮೂರು-ಹಂತದ ವಿಧಾನ:
ಭಾವನಾತ್ಮಕವಾಗಿ ಕೈದಿಗಳನ್ನು ಗುಣಪಡಿಸುವುದು
ಉಸಿರಾಟದ ತಂತ್ರಗಳೊಂದಿಗೆ
ಜೀವನೋಪಾಯವನ್ನು ಒದಗಿಸುವುದು
ಕೈದಿಗಳಿಗೆ ವೃತ್ತಿಪರ ತರಬೇತಿಯನ್ನು ಆಯೋಜಿಸುವ ಮೂಲಕ
ಒತ್ತಡವನ್ನು ತಗ್ಗಿಸುವ ಜೈಲು ಸಿಬ್ಬಂದಿ
ವಿಶೇಷವಾಗಿ ವಿನ್ಯಾಸಗೊಳಿಸಿದ ಕಾರ್ಯಕ್ರಮಗಳನ್ನು ನಡೆಸುವ ಮೂಲಕ
ಪರಿಣಾಮ
8 ಲಕ್ಷ +
ಅನುಭವಿಸಿದ್ದಾರೆ
ರೂಪಾಂತರವನ್ನು
7,000+
ಸಶಸ್ತ್ರ ದಂಗೆಕೋರರು
ಸುಧಾರಿಸಿದ್ದಾರೆ
3.5 ಲಕ್ಷ
ಕೈದಿಗಳು
ಭಾರತದಲ್ಲಿ 100 ಜೈಲುಗಳಲ್ಲಿ ಸುಧಾರಣೆಯಾಗಿದೆ
17
ಕೌಶಲ್ಯ ಅಭಿವೃದ್ಧಿ ಕೇಂದ್ರಗಳು
ಭಾರತದಾದ್ಯಂತ ಜೈಲುಗಳಲ್ಲಿ
60,000
ಅಪರಾಧಿಗಳು
ತಿಹಾರ್ ಜೈಲಿನಲ್ಲಿ ಲಾಭವಾಯಿತು
65
ದೇಶಗಳು
ಪ್ರಪಂಚದಾದ್ಯಂತ ಜೈಲು ಕಾರ್ಯಕ್ರಮಗಳನ್ನು ನಡೆಸುತ್ತದೆ
ನಿಮ್ಮ ಬೆಂಬಲದಿಂದ ನಾವು ಇನ್ನೂ ಹೆಚ್ಚಿನದನ್ನು ಸಾಧಿಸಬಹುದು
ಒಂದು ಜೀವವನ್ನು ಪುನರುಜ್ಜೀವನಗೊಳಿಸಲು ಸಹಾಯಕರಾಗಿ
ಸಾಮಾಜಿಕ ಉಪಕ್ರಮಗಳ ಬಗ್ಗೆ ತೆಗೆದುಕೊಂಡ ಬಹುಮುಖಿ ವಿಧಾನಗಳು ಅನೇಕ ಜೀವಗಳನ್ನು ಉಳಿಸಿವೆ, ಅನೇಕ ನಗುಮೊಗಗಳನ್ನು ಬೆಳಗಿಸಿವೆ ಮತ್ತು ಎಷ್ಟೋ ಸಮುದಾಯಗಳಿಗೆ ಪ್ರಗತಿಯನ್ನು ಸಾಧಿಸಲು ಸಹಕಾರಿಯಾಗಿವೆ. ಪ್ರತಿಯೊಂದು ಸೇವಾ ಕಾರ್ಯದ ತುಣುಕನ್ನು ಕೂಡಾ, ಸಮರ್ಪಣಾ ಭಾವದೊಂದಿಗೆ ವಿಶ್ಲೇಷಣೆಯನ್ನು ನಡೆಸಿ, ಮಾನವೀಯತೆಯನ್ನು ಮಂಚೂಣಿಯಲ್ಲಿ ಇರಿಸಿಕೊಂಡು, ಚಿಂತನಾಶೀಲವಾದ ಕಾಳಜಿಯೊಂದಿಗೆ ರಚಿಸಲಾಗಿದೆ.
ದಾನ ಮಾಡಿ