meditation yoga - smiling young woman near a lake

ಹ್ಯಾಪಿನೆಸ್ ಪ್ರೋಗ್ರಾಮ್ ಫಾರ್ ಯೂಥ್

ಸಂತೋಷದ ರಹಸ್ಯವು ನಿಮ್ಮ ಉಸಿರಿನಲ್ಲಿದೆ

22-35 ವರ್ಷಗಳ ವಯೋಮಾನದವರಿಗೆ

3 ದಿನ ಅಥವಾ 6 ದಿನದ ಕಾರ್ಯಕ್ರಮ- ದಿನಕ್ಕೆ 2-3 ಗಂಟೆಗಳು

*ನಿಮ್ಮ ದೇಣಿಗೆಯು ನಿಮಗೂ ಹಾಗೆಯೇ ಆರ್ಟ್ ಆಫ಼್ ಲಿವಿಂಗ್ ನ ಸಾಮಾಜಿಕ ಯೋಜನೆಗಳಿಗೂ ಸಹಕಾರಿ.

ನೋಂದಾಯಿಸಿ

ಈ ಕಾರ್ಯಕ್ರಮದಿಂದ ನನಗೇನು ಸಿಗುತ್ತದೆ?

icon

ಉತ್ತಮ ಮನಃಶ್ಶಾಂತಿ

ಮನಸ್ಸನ್ನು ಪ್ರಶಾಂತವಾಗಿಡಲು ಮತ್ತು ನಿಮ್ಮ ದಿನನಿತ್ಯದ ಜೀವನದಲ್ಲಿ ಹೆಚ್ಚಿನ ಶಾಂತಿ ಮತ್ತು ಸಂತೋಷದ ಅನುಭವಕ್ಕೆ ಪರಿಣಾಮಕಾರಿ ಪ್ರಕ್ರಿಯೆಗಳ ಕಲಿಕೆ

icon

ಹೆಚ್ಚಿನ ಶಕ್ತಿ

ದಣಿವನ್ನು ನಿವಾರಿಸಿಕೊಳ್ಳಬಹುದು, ಹೆಚ್ಚಾದ ಶಕ್ತಿಯ ಮಟ್ಟವನ್ನು ಅನುಭವಿಸಬಹುದು. ಆ ದಿನದಂದು ನೀವು ಮಾಡಲು ಹೊರಟಿರುವ ಎಲ್ಲಾ ಕಾರ್ಯಗಳನ್ನೂ ಮಾಡಿ ಮುಗಿಸುತ್ತೀರಿ.

icon

ಒತ್ತಡ ಮತ್ತು ಆತಂಕದ ನಿವಾರಣೆ

ಒತ್ತಡವನ್ನು ಕಡಿಮೆ ಮಾಡುವಂತಹ, ಆತಂಕವನ್ನು ನಿವಾರಿಸುವಂತಹ ಹಾಗು ಕಠಿಣ ಪರಿಸ್ಥಿತಿಯಲ್ಲೂ ವಿಶ್ರಮಿಸಬಹುದಾದಂತಹ ಪ್ರಕ್ರಿಯೆಗಳನ್ನು ಕಲಿಯಿರಿ. ಇದು ಸಂಶೋಧನೆಗಳಿಂದ ಪ್ರಮಾಣಿಕೃತವಾಗಿದೆ.

icon

ನಿಮ್ಮ ಮನಸ್ಸಿನ ಮೇಲೆ ಹತೋಟಿ

ಆಧುನಿಕ ಜೀವನದ ಏರಿಳಿತಗಳನ್ನೂ ನಿಭಾಯಿಸಬಲ್ಲಂತಹ ಪ್ರಾಚೀನ ರಹಸ್ಯಗಳನ್ನು ಈ ಕಾರ್ಯಕ್ರಮದಲ್ಲಿ ಹೇಳಿಕೊಡಲಾಗುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ?

ಸುದರ್ಶನ ಕ್ರಿಯೆಯು, ಆನಂದದ ಅನುಭೂತಿಯ ಶಿಬಿರದ ಪ್ರಮುಖ ಪ್ರಕ್ರಿಯೆಯಾಗಿದೆ. ಈ ಉಸಿರಾಟದ ಪ್ರಕ್ರಿಯೆಯು ಉಸಿರಿನ ಸಹಜವಾದ ಲಯಗಳನ್ನು ಒಳಗೊಂಡಿದೆ ಮತ್ತು ಈ ಲಯಗಳು ದೇಹ, ಮನಸ್ಸು ಮತ್ತು ಭಾವನೆಗಳ ನಡುವೆ ಸಾಮರಸ್ಯವನ್ನು ಉಂಟುಮಾಡುತ್ತವೆ. ಅದು ಒತ್ತಡ, ದಣಿವು, ಕೋಪ, ಆಶಾಭಂಗತನ, ಖಿನ್ನತೆಯಂತಹ ನಕಾರಾತ್ಮಕ ಭಾವನೆಗಳನ್ನು ನಿವಾರಿಸುತ್ತದೆ. ಇದರಿಂದ ನೀವು ಪ್ರಶಾಂತತೆ, ಚೈತನ್ಯಶೀಲತೆ, ಏಕಾಗ್ರತೆಯ ಜೊತೆ ಜೊತೆಗೆ ವಿಶ್ರಾಂತಿಯ ಅನುಭವನ್ನು ಪಡೆಯುವಿರಿ

ಈ ಕಾರ್ಯಕ್ರಮದಲ್ಲಿ ಏನಿದೆ?

  • ಸುದರ್ಶನ ಕ್ರಿಯೆTM
  • ಆಧುನಿಕ ಜೀವನದ ಸವಾಲುಗಳನ್ನು ಎದುರಿಸಲು, ಉಪಯೋಗವಾಗುವಂತಹ ಸರಳವಾದ ಪ್ರಾಚೀನ ಜ್ಞಾನ.
  • ಶಕ್ತಿಯ ರಹಸ್ಯಗಳು

ಸಂಸ್ಥಾಪಕರು

ಗುರುದೇವ ಶ್ರೀ ಶ್ರೀ ರವಿಶಂಕರ್

ಗುರುದೇವ್ ಶ್ರೀ ಶ್ರೀ ರವಿಶಂಕರ್, ಇವರು ಜಾಗತಿಕ ಮಾನವತಾವಾದಿ, ಆಧ್ಯಾತ್ಮಿಕ ನಾಯಕರು ಮತ್ತು ಶಾಂತಿಯ ರಾಯಭಾರಿ, ಎಂಬುದಾಗಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇವರು ಒತ್ತಡ-ಮುಕ್ತ ಹಾಗೂ ಹಿಂಸಾ-ಮುಕ್ತ ಸಮಾಜದ ನಿರ್ಮಾಣಕ್ಕಾಗಿ, ವಿಶ್ವದಾದ್ಯಂತವೂ, ಅಭೂತ ಪೂರ್ಣವಾದ ಚಳುವಳಿಯನ್ನು ಮುನ್ನಡೆಸಿದ್ದಾರೆ.

ಇನ್ನಷ್ಟು ತಿಳಿಯಿರಿ

ನಾನು ಸೇರಲು ಬಯಸುತ್ತೇನೆ ಆದರೆ…

ಈ ಪ್ರಕ್ರಿಯೆಯಿಂದ ಯಾವುದಾದರೂ ಅಡ್ಡ ಪರಿಣಾಮವಿದೆಯೆ?

ಇದರ ಒಂದೇ ಒಂದು ಅಡ್ಡ-ಪರಿಣಾಮವೆಂದರೆ, ಎಂದಿಗೂ ಬಾಡದಿರುವಂತಹ ಮುಗುಳ್ನಗೆ! ಸುದರ್ಶನ ಕ್ರಿಯೆ ಯನ್ನು ಜಾಗತಿಕವಾಗಿ, ಪ್ರತಿನಿತ್ಯ ಅನೇಕ ಮಿಲಿಯನ್ ಜನರು ಅಭ್ಯಾಸ ಮಾಡುತ್ತಾರೆ ಮತ್ತು ಅದರ ಆರೋಗ್ಯದ ಲಾಭಗಳನ್ನು ದಾಖಲಿಸಲಾಗಿವೆ.

ನಮ್ಮ ಪ್ರಕ್ರಿಯೆಗಳು ಅಭ್ಯಾಸ ಮಾಡಲು ಬಹಳ ಸುರಕ್ಷಿತವಾದವು. ನಿಮಗೆ ಆಸ್ತಮ, ಅಧಿಕ ರಕ್ತದೊತ್ತಡ, ಹೃದೋಗ, ಬೆನ್ನು ನೋವು ಇದ್ದಲ್ಲಿ, ಕಾರ್ಯಕ್ರಮದ ಸಮಯದಲ್ಲಿ ನಿಮಗೆ ವಿಶೇಷವಾದ ಮಾರ್ಗದರ್ಶನವನ್ನು ನೀಡಲಾಗುತ್ತದೆ.

ಈ ಅಭ್ಯಾಸದಿಂದ ನನ್ನ ಆರೋಗ್ಯವು ಸುಧಾರಿಸುತ್ತದೆಯೆ?

ಹೌದು, ಖಂಡಿತವಾಗಿಯು! ಸುದರ್ಶನ ಕ್ರಿಯೆಯ ನಿತ್ಯಾಭ್ಯಾಸದಿಂದ ನಿದ್ದೆಯ ಗುಣಮಟ್ಟ ಸುಧಾರಿಸುತ್ತದೆ, ರೋಗನಿರೋಧಕ ಶಕ್ತಿಯು ವರ್ಧಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ, ಖಿನ್ನತೆಯ ಮಟ್ಟವೂ ಕುಗ್ಗುತ್ತದೆ. ಈ ಕಾರ್ಯಕ್ರಮದಿಂದ ಲಾಭ ಪಡೆದವರ ಹೇಳಿಕೆಗಳನ್ನು ನೀವು ಓದಬೇಕಷ್ಟೆ. ನಿಮಗೇನಾದರೂ ಆರೋಗ್ಯದ ಸಮಸ್ಯೆಗಳಿದ್ದರೆ, ನಿಮ್ಮ ಶಿಕ್ಷಕರಿಗೆ ಮೊದಲೇ ತಿಳಿಸಿ. ಇದರಿಂದ ನಿಮಗೆ ಸೂಕ್ತವಾದಂತಹ, ಉತ್ತಮವಾದ ಅನುಭವವು ಸಿಗುವಂತೆ ಶಿಕ್ಷಕರು ಮಾಡಬಹುದು.

ದೇಣೆಗೆಯನ್ನು ಏಕೆ ಪಡೆಯುತ್ತೀರಿ?

ಮೊದಲನೆಯ ಕಾರಣವೆಂದರೆ, ನಿಮ್ಮ ಸಮಯವನ್ನು ಈ ಕಾರ್ಯಕ್ರಮವನ್ನು ಮಾಡುವ ಸಲುವಾಗಿ ಬದ್ಧವಾಗಿಡಬೇಕು. ಎರಡನೆಯ ಕಾರಣವೆಂದರೆ, ನಿಮಗೆ ಜೀವನಕ್ಕೆ ಅವಶ್ಯಕವಾದ ಕುಶಲತೆಗಳನ್ನು ಹೇಳಿಕೊಡುವುದರೊಡನೆ ನಿಮ್ಮ ದಾನದ ಶುಲ್ಕವು ಭಾರತದಲ್ಲಿ ನಡೆಯುವ ಸೇವಾ ಕಾರ್ಯಗಳಿಗೆ ಹೋಗುತ್ತದೆ. ಉದಾಹರಣೆಗೆ, 70,000 ಬುಡಕಟ್ಟು ಮಕ್ಕಳ ಶಿಕ್ಷಣ, 43 ನದಿಗಳ ಪುನಶ್ಚೇತನ ಕಾರ್ಯ, ಜೀವನೋಪಾಯದ ಕುಶಲತೆಗಳನ್ನು ಕಲಿತ 2,04,802 ಗ್ರಾಮೀಣ ಯುವಕರ ಸಬಲೀಕರಣ, 720 ಗ್ರಾಮಗಳನ್ನು ಸೌರದೀಪಗಳಿಂದ ವಿದ್ಯುದೀಕರಣಗೊಳಿಸುವುದು.

ನನಗೆ ಒತ್ತಡವಿಲ್ಲ. ಆದರೂ ಈ ಕಾರ್ಯಕ್ರಮವನ್ನು ನಾನೇಕೆ ಮಾಡಬೇಕು?

ನಿಮಗೆ ಒತ್ತಡವಿಲ್ಲದಿದ್ದರೆ ಅದು ಬಹಳ ಅದ್ಭುತವಾದ ವಿಷಯ! ನೀವು ಉತ್ತಮವಾದ ಜೀವನವನ್ನೇ ನಡೆಸುತ್ತಿರುವಿರಿ ಎಂದಾಯಿತು. ಆದರೆ ಹೀಗೂ ಆಲೋಚಿಸಿ ನೋಡಿ. ಹಣವೆಲ್ಲಾ ಖರ್ಚಾದ ನಂತರ ಹಣವನ್ನು ಕೂಡಿಡಬೇಕೆಂದು ನಿರ್ಧರಿಸುವಿರೇ? ಅಥವಾ ಅನಾರೋಗ್ಯದಿಂದ ಪೀಡಿತರಾದ ನಂತರವೇ ವ್ಯಾಯಾಮ ಮಾಡಬೇಕೆಂದು ನಿರ್ಧರಿಸುತ್ತೀರೇ? ಇಲ್ಲ. ಅಲ್ಲವೆ? ಆದ್ದರಿಂದ, ಭವಿಷ್ಯದಲ್ಲಿ ನಿಮಗೆ ಬೇಕಾಗುವ ಬಲವನ್ನು, ಸಹಿಷ್ಣುತೆಯನ್ನು ಈಗಿಂದಲೇ ಬೆಳೆಸಿಕೊಳ್ಳಬಹುದಲ್ಲವೆ? ಆದರೆ ನೋಡಿ, ಎಲ್ಲವೂ ನಿಮ್ಮ ನಿರ್ಧಾರದ ಮೇಲೆ ಅವಲಂಬಿಸಿದೆ. ನೀವು ಒತ್ತಡದಿಂದ ತುಂಬಿ ಹೋಗುವವರೆಗೂ ಕಾಯಬಹುದು. ಆಗ ನಿಮಗೆ ಸಹಾಯ ಮಾಡಲು ಈ ಕಾರ್ಯಾಗಾರವು ನಿಮಗಾಗಿ ಕಾಯುತ್ತಿರುತ್ತದೆ!