Youth programs - Girl

ಮೇಧಾ ಯೋಗ ಲೆವೆಲ್ 1

ಒತ್ತಡವನ್ನು ಎದುರಿಸಲು, ಏಕಾಗ್ರತೆಯನ್ನು ಹೆಚ್ಚಿಸುತ್ತದೆ, ಕೋಪವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ

13-18 ವಯೋಮಾನದ ಹದಿವಯಸ್ಕರಿಗೆ

ಮೊದಲನೆಯ ವಾರದಿಂದಲೇ ಫಲಿತಾಂಶಗಳನ್ನು ಕಾಣಬಹುದು.

ನೋಂದಾಯಿಸಿ

ಹದಿವಯಸ್ಕರಿಗೆ ಇದರಿಂದ ಹೇಗೆ ಲಾಭವಾಗುತ್ತದೆ?

icon

ಕೋಪವನ್ನು ಮತ್ತು ಆಕ್ರಮಣಶೀಲತೆಯನ್ನು ಸರಳವಾಗಿ ನಿಭಾಯಿಸಬಹುದು

ಒತ್ತಡ ಮತ್ತು ಆತಂಕಗಳನ್ನು ಕಡಿಮೆ ಮಾಡುವ ವಿಶೇಷವಾದ ತಂತ್ರಗಳ ಮೂಲಕ ಕೋಪ, ಆಕ್ರಮಣಶೀಲತೆ, ಖಿನ್ನತೆಗಳಿಂದ ಮುಕ್ತರಾಗಬಹುದು.

icon

ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಿ

ಹೆಚ್ಚಿನ ಏಕಾಗ್ರತೆಯಿಂದ ಪ್ರಯತ್ನಗಳನ್ನು ಸಾಂದ್ರೀಕರಿಸಿ ನಿಮ್ಮ ಪ್ರಯತ್ನಗಳ ಫಲಿತಾಂಶವನ್ನು ಹೆಚ್ಚಿಸಿಕೊಳ್ಳಲು ಕಲಿಯಿರಿ.

icon

ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿ

ಸಮವಯಸ್ಕರ ಒತ್ತಡ, ಸ್ಪರ್ಧೆ, ಚಹರೆ, ಹಾರ್ಮೋನುಗಳು, ಸಂಬಂಧಗಳು ಮುಂತಾದ ಹದಿವಯಸ್ಕರ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಪಡೆಯುತ್ತಾರೆ.

ಮೇಧಾಯೋಗ ಎಂದರೇನು?

“ಹದಿಹರೆಯದಲ್ಲಿ ಸಂತೋಷವಾಗಿರುವ ಮಕ್ಕಳು ಮುಂದೆ ಆರೋಗ್ಯವಂತ ವಯಸ್ಕರಾಗಿ ಬೆಳೆಯುತ್ತಾರೆ” ಎಂಬುದು ಸಂಶೋಧನೆಯ ಮೂಲಕ ತಿಳಿದುಬಂದ ಅಂಶ. ಆದರೆ ಹದಿವಯಸ್ಕರಲ್ಲಿ ಸಂತೋಷ ವಿರಳವಾಗುತ್ತಿದೆ. ಬಾಲ್ಯದಿಂದ ಯೌವನಕ್ಕೆ ಕಾಲಿಡುವಾಗ ವಿದ್ಯಾಭ್ಯಾಸ, ಪ್ರವೇಶಪರೀಕ್ಷೆಗಳು, ಸಮವಯಸ್ಕರ ಒತ್ತಡ ಮತ್ತು ಸಂಬಂಧಗಳಲ್ಲಿ ಏರುಪೇರು ಮುಂತಾದ ಅನೇಕ ಸಮಸ್ಯೆಗಳು ಎದುರಾಗುತ್ತವೆ.

ಮೇಧಾ ಯೋಗ, ಲೆವೆಲ್‌ 1, ಈ ಕಾರ್ಯಕ್ರಮವು ಹದಿವಯಸ್ಕರ ಒತ್ತಡಗಳನ್ನು ಕಡಿಮೆ ಮಾಡಿ ಅವರಲ್ಲಿ ಸಂತೋಷವನ್ನು ಹುಟ್ಟಿಸುವುದರ ಮೂಲಕ ಹೆಚ್ಚಿನ ಸಾಧನೆಗೆ ಅವರನ್ನು ಅಣಿಗೊಳಿಸುತ್ತದೆ. ವಿಶೇಷವಾದ ಉಸಿರಾಟದ ತಂತ್ರಗಳ ಮೂಲಕ ಅವರು ತಮ್ಮ ನಕಾರಾತ್ಮಕ ಭಾವನೆಗಳನ್ನು ತೊಡೆದುಕೊಂಡು ಒತ್ತಡವನ್ನು ನಿಭಾಯಿಸಲು ಕಲಿಯುತ್ತಾರೆ. ಅಧ್ಯಯನ, ಸಮವಯಸ್ಕರ ಒತ್ತಡ, ಸ್ವಾಭಿಮಾನ, ಮುಂತಾದ ವಿಷಯಗಳ ಮೇಲೆ ನಡೆಯುವ ಚರ್ಚೆಯು ಅವರಿಗೆ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡು ಯಶಸ್ವಿಯಾಗಲು ಸಲಹೆ, ಮಾರ್ಗದರ್ಶನಗಳನ್ನು ನೀಡುತ್ತದೆ. ಜೊತೆಗೆ, ಸಾಂಘಿಕ ಕೆಲಸ ಮತ್ತು ಸಹಕಾರ ಮನೋಭಾವ ಮುಂತಾದ ಬದುಕಿನ ಕೌಶಲ್ಯಗಳನ್ನು ಸಂವಾದಾತ್ಮಕ ಪ್ರಕ್ರಿಯೆ ಮತ್ತು ಆಟಗಳ ಮೂಲಕ ಕಲಿಸಲಾಗುತ್ತದೆ.

ಸರಸವಾದ ಆಸಕ್ತಿ ಕೆರಳಿಸುವ ವಾತಾವರಣದಲ್ಲಿ ಬೆರೆಯುವುದು ಮತ್ತು ಕಲಿಯುವುದರ ಮೂಲಕ ಯಶಸ್ಸು ಮತ್ತು ಸಂತೋಷ ಜೊತೆಜೊತೆಯಾಗಿರುವುದು ಸಾಧ್ಯ ಎಂಬ ವಿಶ್ವಾಸ ಅವರಲ್ಲಿ ಮೊಳೆಯುತ್ತದೆ.

ಮೇಧಾ ಯೋಗದ ಮೇಲಿನ ಸಂಶೋಧನೆ

icon

ನಿಖರತೆ

ಹದಿವಯಸ್ಕರ ಕೆಲಸದ ನಿಖರತೆಯು 22 % ರಷ್ಟು ಹೆಚ್ಚುತ್ತದೆ

icon

ಮಾನಸಿಕ ಆರೋಗ್ಯ

ಮಾನಸಿಕ ಆರೋಗ್ಯದ ಅಂಕಗಳಲ್ಲಿ 29% ಹೆಚ್ಚಳ

icon

ಭಾವನಾತ್ಮಕ ಸಮಸ್ಯೆಗಳು

ಸಂಶೋಧನೆಗೆ ಒಳಪಟ್ಟ ಜನರ ಭಾವನಾತ್ಮಕ ಸಮಸ್ಯೆಗಳು 69% ರಷ್ಟು ಕಡಿಮೆಯಾದವು.

icon

ಅತಿ ಕಾರ್ಯಶೀಲತೆ

ಸಂಶೋಧನೆಗೆ ಒಳಪಟ್ಟ ಜನರಲ್ಲಿ 67% ರಷ್ಟು ಕಡಿಮೆಯಾಯಿತು.

icon

ಸಮವಯಸ್ಕರ ಒತ್ತಡ

ಸಂಶೋಧನೆಗೆ ಒಳಪಟ್ಟ ಜನರಲ್ಲಿ ಈ ಸಮಸ್ಯೆಯು 50% ರಷ್ಟು ಕಡಿಮೆಯಾಯಿತು.

icon

ವರ್ತನೆಯ ಸಮಸ್ಯೆಗಳು

ಸಂಶೋಧನೆಗೆ ಒಳಪಟ್ಟ ಜನರಲ್ಲಿ 78% ರಷ್ಟು ಕಡಿಮೆಯಾಗಿತ್ತು.

ಸಂಸ್ಥಾಪಕರು

ಗುರುದೇವ ಶ್ರೀ ಶ್ರೀ ರವಿಶಂಕರ್

ಗುರುದೇವ್ ಶ್ರೀ ಶ್ರೀ ರವಿಶಂಕರ್, ಇವರು ಜಾಗತಿಕ ಮಾನವತಾವಾದಿ, ಆಧ್ಯಾತ್ಮಿಕ ನಾಯಕರು ಮತ್ತು ಶಾಂತಿಯ ರಾಯಭಾರಿ, ಎಂಬುದಾಗಿ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇವರು ಒತ್ತಡ-ಮುಕ್ತ ಹಾಗೂ ಹಿಂಸಾ-ಮುಕ್ತ ಸಮಾಜದ ನಿರ್ಮಾಣಕ್ಕಾಗಿ, ವಿಶ್ವದಾದ್ಯಂತವೂ, ಅಭೂತ ಪೂರ್ಣವಾದ ಚಳುವಳಿಯನ್ನು ಮುನ್ನಡೆಸಿದ್ದಾರೆ.

ಇನ್ನಷ್ಟು ತಿಳಿಯಿರಿ

ಮುಂಬರುವ ಕಾರ್ಯಕ್ರಮಗಳು

ನಾನು ಈ ಕಾರ್ಯಾಗಾರವನ್ನು ಸೇರಲಿಚ್ಛಿಸುತ್ತೇನೆ, ಆದರೆ...

ಈ ಕಾರ್ಯಕ್ರಮದ ಬಗ್ಗೆ ಮತ್ತಷ್ಟು ವಿವರ ನೀಡುತ್ತೀರಾ?

ಮೇಧಾಯೋಗವು ಪ್ರಾಚೀನವಾದ ಯೋಗ ಮತ್ತು ವ್ಯಾಯಾಮಗಳನ್ನು ಅನುಸರಿಸಿ ಗುರುದೇವರು ನಿರೂಪಿಸಿರುವ ತಂತ್ರಗಳನ್ನು ಆಧರಿಸಿದೆ. ಧ್ಯಾನ, ಯೋಗ ಮತ್ತು ಉಸಿರಾಟದ ತಂತ್ರಗಳ ಜೊತೆಗೆ ಸಂದೇಹ, ಭಯ, ಆತಂಕಗಳಿಂದ ಮುಕ್ತರಾಗಿ ಆತ್ಮವಿಶ್ವಾಸದಿಂದ ಬದುಕುವ ಕಲೆಯನ್ನು ಹದಿವಯಸ್ಕರಿಗೆ ಹೇಳಿಕೊಡಲಾಗುತ್ತದೆ. ಅವರು ಮುಕ್ತವೇದಿಕೆಯಲ್ಲಿ ಸಹಭಾಗಿಗಳೊಡನೆ ತಮ್ಮ ಸಮಸ್ಯೆಗಳನ್ನು ಚರ್ಚಿಸುವ ಮೂಲಕ ಅವರೊಂದಿಗೆ ಆತ್ಮೀಯತೆಯನ್ನು ಬೆಳೆಸಿಕೊಳ್ಳುತ್ತಾರೆ. ಹದಿವಯಸ್ಕರಿಗೆ ಮುಖ್ಯವಾದ ಆತ್ಮೀಯ ಭಾವನೆಯನ್ನು ಈ ಕಾರ್ಯಾಗಾರವು ಕಲಿಸುತ್ತದೆ. ಅವರಿಗೆ ಅಧ್ಯಾತ್ಮ ಮತ್ತು ಭಾರತೀಯ ಪರಂಪರೆಯ ಪರಿಚಯವನ್ನೂ ಮಾಡಿಕೊಡಲಾಗುತ್ತದೆ.

ನಾನು ಇದಕ್ಕೆ ನೊಂದಾಯಿಸಿಕೊಂಡರೆ ಮುಂದೇನು?

ಒಂದು ನಮೂನೆಯಲ್ಲಿ ನಿಮ್ಮ ಹದಿವಯಸ್ಕ ಮಕ್ಕಳ ವಿವರಗಳನ್ನು ನೀಡುವಂತೆ ಹೇಳಲಾಗುತ್ತದೆ. ಮುಂದೆ, ಪೇಮೆಂಟ್‌ ಗೇಟ್‌ವೇಯ ಮೂಲಕ ನೀವು ನಿರ್ದಿಷ್ಟ ಶುಲ್ಕವನ್ನು ಪಾವತಿಸಬೇಕು. ನಂತರ ನಾವೇ ನಿಮ್ಮನ್ನು ವಾಟ್ಸ್ಯಾಪ್‌ ಮತ್ತು ಇಮೈಲ್‌ ಮುಖಾಂತರ ಸಂಪರ್ಕಿಸಿ ಕಾರ್ಯಕ್ರಮದ ವಿವರ ಮತ್ತು ವೇಳಾಪಟ್ಟಿಯನ್ನು ತಿಳಿಸುತ್ತೇವೆ.

ಇದು ಮತ್ತೊಂದು ಆನ್ ಲೈನ್ ತರಗತಿಯೆ? ಹಾಗಿದ್ದರೆ ನನ್ನ ಮಗ/ಮಗಳು ಅದನ್ನು ಮಾಡಲು ಬಯಸುತ್ತಾರೋ ಇಲ್ಲವೋ..

ನಿಮ್ಮ ಸಮಸ್ಯೆ ನಮಗೆ ಅರ್ಥವಾಗುತ್ತದೆ. ಆದರೆ, ನಿಮ್ಮ ಹದಿವಯಸ್ಕ ಮಕ್ಕಳು ಯಾವುದೇ ಮಾನಸಿಕ ತಾಕಲಾಟವಿಲ್ಲದ, ಪ್ರಶಾಂತ, ಸಂತೋಷಭರಿತ, ಸಫಲ ಜೀವನವನ್ನು ನಡೆಸಬೇಕೆಂದು ನೀವು ಬಯಸುತ್ತೀರಲ್ಲವೇ? ಈ ಕಾರ್ಯಕ್ರಮದ ಮೂಲಕ ನಿಮ್ಮ ಮಕ್ಕಳು ತಮ್ಮ ಜೀವನದ ಉತ್ಕರ್ಷದ ಮೇಲೆ ಪರಿಣಾಮ ಬೀರುವ ವಯೋಸಹಜವಾದ ಒತ್ತಡ ಮತ್ತು ಪ್ರಭಾವಗಳನ್ನು ಎದುರಿಸಲು ಸಮರ್ಥರಾಗುವುದನ್ನು ನೀವೇ ನೋಡುತ್ತೀರಿ.

ನನ್ನ ಮಗ/ಮಗಳು ಈ ಕಾರ್ಯಕ್ರಮದಲ್ಲಿ ನೇರವಾಗಿ ಪ್ರಶ್ನೆಗಳನ್ನು ಕೇಳಬಹುದೆ?

ಖಂಡಿತವಾಗಿ! ಈ ಕಾರ್ಯಕ್ರಮವು ಸಂವಾದಾತ್ಮಕವಾಗಿರುವುದರಿಂದ ಮಕ್ಕಳು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ತಿಳಿಸಬಹುದು ಮತ್ತು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.

ನನ್ನ ಮಗ/ಮಗಳು ಸಂಕೋಚದ ಸ್ವಭಾವ ಹೊಂದಿದ್ದು ಈ ಕಾರ್ಯಾಗಾರದ ಚಟುವಟಿಕೆಗಳಲ್ಲಿ ಭಾಗವಹಿಸದಿರಬಹುದು. ಹಾಗಿದ್ದರೂ ಕಾರ್ಯಾಗಾರದಿಂದ ಪ್ರಯೋಜನವಾಗಬಹುದೆ?

ನಿಶ್ಚಯವಾಗಿ! ಈ ಕಾರ್ಯಾಗಾರದಿಂದ ಅವರಿಗೆ ನಿಜವಾಗಿಯೂ ಸಹಾಯವಾಗುತ್ತದೆ. ಕಾರ್ಯಾಗಾರದ ನಂತರ ಸಂಕೋಚಸ್ವಭಾವದ ಮಕ್ಕಳು ತಮ್ಮ ಹಿಂಜರಿಕೆಗಳನ್ನು ತೊಡೆದುಹಾಕಿ ಮುಕ್ತವಾಗಿ ಮಾತನಾಡುವುದನ್ನು ನೀವು ನೋಡಬಹುದು.