ಗ್ರಾಮೀಣಾಭಿವೃದ್ಧಿ

ಸೌರ ಶಕ್ತಿಯ ಬೆಳಕು, ಶೌಚಾಲಯದ ಸೌಲಭ್ಯಗಳು, ಬಲವಾದ ಸ್ಥಳೀಯ ಆಡಳಿತ - ಇವುಗಳನ್ನು ಗ್ರಾಮೀಣ ಭಾರತದಲ್ಲಿ ಹೆಚ್ಚಿನ ಮಟ್ಟದಲ್ಲಿ ತರಲು ಸಹಕರಿಸಿ

ದಾನ ಮಾಡಿ

icon

ಸವಾಲು

ನೈರ್ಮಲ್ಯ ಸೌಲಭ್ಯಗಳ ಕೊರತೆ, ಅಸಮರ್ಪಕ ವಿದ್ಯುತ್, ಕಳಪೆ ಶಿಕ್ಷಣ ಮೂಲಸೌಕರ್ಯ

icon

ತಂತ್ರ

ಮೂಲಸೌಕರ್ಯ ಅಭಿವೃದ್ಧಿ, ಸಮುದಾಯ ಕಟ್ಟಡ, ಸ್ಥಳೀಯ ಯುವಕರನ್ನು ಸಬಲೀಕರಣಗೊಳಿಸುವುದು

icon

ವ್ಯಾಪ್ತಿ

ಮಹಾರಾಷ್ಟ್ರದಾದ್ಯಂತ ನಿರ್ಮಿಸಲಾದ ವಾಟರ್ ರೀಚಾರ್ಜ್ ಪಿಟ್‌ಗಳು, ಲೈಟ್ ಎ ಹೋಮ್ ಯೋಜನೆ

ಅವಲೋಕನ

ಗ್ರಾಮೀಣ ಭಾರತ ನಮ್ಮನ್ನು ಕೈಬಿಚ್ಚಿ ಕರೆಯುತ್ತಿದೆ! ನೈರ್ಮಲ್ಯ, ಶುದ್ಧ ಕುಡಿಯುವ ನೀರು, ವಿದ್ಯುತ್, ಆರ್ಥಿಕ ಅಭಿವೃದ್ಧಿ ಮುಂತಾದ ಮೂಲಭೂತ ವಿಷಯಗಳಿಗೆ ಮಾತ್ರವಲ್ಲ, ಆದರೆ ದೀರ್ಘಕಾಲೀನ ಬದಲಾವಣೆಗೆಗೂ ಸಹ. ಸರಳವಾಗಿ ಹೇಳಬೇಕೆಂದರೆ, ಯಾರೂ ಬಳಸಲು ಯೋಗ್ಯವಲ್ಲದ ಶೌಚಾಲಯವನ್ನು ನಿರ್ಮಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಗ್ರಾಮದಲ್ಲಿ ಯಾರೂ ಸೌರ ಶಕ್ತಿಯ ದೀಪ ಅಳವಡಿಸಲು ವ್ಯವಸ್ಥೆ ಇಲ್ಲದ ಮೇಲೆ ಸೋಲಾರ್ ಸೆಂಟರ್ ನಡೆಸುವುದರಲ್ಲಿ ಅರ್ಥವಿಲ್ಲ. ಸಮುದಾಯದ ಸಮಸ್ಯೆಗಳು ಪರಿಹಾರವಾಗದೇ ಇರುವಾಗ ಮಾದರಿ ಗ್ರಾಮ ಯೋಜನೆಯಿಂದ ಯಾವುದೇ ಪ್ರಯೋಜನವಿಲ್ಲ.

ಉತ್ತಮ ಜೀವನಶೈಲಿ ಮತ್ತು ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗುವ ಹಳ್ಳಿಗರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವಾಗ, ಗ್ರಾಮೀಣ ಭಾರತದಲ್ಲಿ ರೈತರ ಹಾಗು ಕಾರ್ಮಿಕರ ಕೊರತೆಯನ್ನು ಎದುರಿಸುವುದು ಹಾಗು ಈ ಸಮತೋಲನವನ್ನು ಕಾಪಾಡುವುದು ಅತಿ ಅವಶ್ಯಕ. ಸುಸ್ಥಿರ ಬದಲಾವಣೆಯನ್ನು ತರುವುದಕ್ಕೆ ಸಮುದಾಯದ ಭಾಗವಹಿಸುವಿಕೆ ಒಂದು ಪ್ರಮುಖ ಅಂಶವೆಂದು ಎಂದು ನಾವು ನಂಬುತ್ತೇವೆ. ಹೀಗಾಗಿ, ಶೌಚಾಲಯಗಳನ್ನು ನಿರ್ಮಿಸುವಾಗ, ನಾವು ಅದನ್ನು ಬಳಸುವಂತೆ ಜನಸಾಮಾನ್ಯರನ್ನು ಜಾಗೃತಗೊಳಿಸುತ್ತೇವೆ. ನಾವು ಸೌರ ಕೇಂದ್ರಗಳನ್ನು ನಿರ್ಮಿಸುವಾಗ, ಸೌರ ಬೆಳಕಿನ ವ್ಯವಸ್ಥೆಯನ್ನು ಅಳವಡಿಸಲು ಮತ್ತು ಸೇವೆ ಮಾಡಲು ನಾವು ಹಳ್ಳಿಯ ಯುವಕರಿಗೆ ತರಬೇತಿ ನೀಡುತ್ತೇವೆ. ನಾವು ಮಾದರಿ ಗ್ರಾಮಗಳ ಬಗ್ಗೆ ಮಾತನಾಡುವಾಗ, ನಾವು ಒಂದು ಹಳ್ಳಿಯ ಸಮಸ್ಯೆಗಳನ್ನು ಅಳೆಯುತ್ತೇವೆ ಮತ್ತು ಅವುಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳುವವರನ್ನು, ಸ್ಥಳೀಯರನ್ನು ಬದಲಾವಣೆಯ ಜ್ಯೋತಿಷಿಗಳಾಗಲು ಪ್ರೇರೇಪಿಸುತ್ತೇವೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ನಮಗೆ ಮೂಲಸೌಕರ್ಯಗಳ  ಅಭಿವೃದ್ಧಿ ಹಾಗು ಜನರ ಅಭಿವೃದ್ಧಿ ಇವೆರಡೂ ಪ್ರಮುಖ. ಈ ಮೂಲ ಮಾದರಿಯೊಂದಿಗೆ, ನಾವು ಈ ಕೆಳಕಂಡ ಕೆಲಸಗಳನ್ನು ಮಾಡುತ್ತಿದ್ದೇವೆ:

  • ದೂರದ ಹಳ್ಳಿಗಳಿಗೆ ಸೌರ ಶಕ್ತಿಯ ಬೆಳಕನ್ನು ಒದಗಿಸಿಕೊಡುತ್ತಿದ್ದೇವೆ.
  • ಕೌಶಲ್ಯ ಅಭಿವೃದ್ಧಿ ತರಬೇತಿಯೊಂದಿಗೆ ಗ್ರಾಮೀಣ ಯುವಕರು ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸುತ್ತಿದ್ದೇವೆ.
  • ಶೌಚಾಲಯಗಳನ್ನು ನಿರ್ಮಿಸುತ್ತಿದ್ದೇವೆ ಮತ್ತು ಸಮುದಾಯಗಳು ಅವುಗಳನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದೇವೆ.
  • ಶುದ್ಧ ಕುಡಿಯುವ ನೀರನ್ನು ಒದಗಿಸುತ್ತಿದ್ದೇವೆ.
  • ಸ್ಥಳೀಯ ಆಡಳಿತವನ್ನು ಬಲಪಡಿಸುತ್ತಿದ್ದೇವೆ.
  • ಗ್ರಾಮಗಳನ್ನು ಸ್ವಾವಲಂಬಿಯನ್ನಾಗಿ ಮಾಡುತ್ತಿದ್ದೇವೆ.

ಹಳ್ಳಿಯ ಜನರು ತಮ್ಮ ಜೀವನ ವಿಧಾನ, ಸಂಪ್ರದಾಯ ಮತ್ತು ಭಾಷೆಯ ಬಗ್ಗೆ ವಿಶ್ವಾಸವನ್ನು ಹೊಂದಲು ಪ್ರಾರಂಭಿಸಿದಾಗ ಭಾರತವು ನಿಜವಾಗಿಯೂ ಸಬಲವಾಗುತ್ತದೆ.

ಗುರುದೇವ ಶ್ರೀ ಶ್ರೀ ರವಿಶಂಕರ್

ಕಾರ್ಯತಂತ್ರ

ನಮ್ಮ ಗ್ರಾಮಾಭಿವೃದ್ಧಿ ಯೋಜನೆಗಳು 3-ಹಂತದ ಕಾರ್ಯತಂತ್ರವನ್ನು ಅನುಸರಿಸುತ್ತವೆ, ಅದನ್ನು ಏಕಕಾಲದಲ್ಲಿ ಕಾರ್ಯಗತಗೊಳಿಸಲಾಗುತ್ತದೆ:

  • ಮೂಲಸೌಕರ್ಯ ಅಭಿವೃದ್ಧಿ:

    ಕೌಶಲ್ಯ ಕೇಂದ್ರಗಳಂತಹ ಸಾಮಾಜಿಕ ಮೂಲಸೌಕರ್ಯಗಳ ಮೂಲಕ ಅಥವಾ ಉತ್ತಮ ಆಡಳಿತಕ್ಕಾಗಿ ಜ್ಞಾನದ ಚೌಕಟ್ಟನ್ನು ಒದಗಿಸುವಂತಹ ಜ್ಞಾನ ಮೂಲಸೌಕರ್ಯಗಳ ಮೂಲಕ, ನಾವು ಸ್ಥಳೀಯರ ಅಗತ್ಯಗಳನ್ನು ಪೂರೈಸುತ್ತೇವೆ ಎಂದು ಖಚಿತಪಡಿಸಿಕೊಳ್ಳುತ್ತೇವೆ.

  • ಸ್ಥಳೀಯ ಯುವಕರನ್ನು ಪರಿಹಾರ-ಕೇಂದ್ರಿತ ಕಾರ್ಯಕ್ರಮಗಳಿಗಾಗಿ ಸಬಲಗೊಳಿಸುವುದು:

    ಈ ಸ್ಥಳೀಯ ಯುವಕರನ್ನು ಕರ್ಮ ಯೋಗ ಕಾರ್ಯಕ್ರಮದಿಂದ (YLTP) ವಿವಿಧ ಅಂಶಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ಅವರ ಸಮುದಾಯಗಳಲ್ಲಿ ಸುಸ್ಥಿರವಾಗಿ ಸೇವಾ ಯೋಜನೆಗಳನ್ನು ಪ್ರಾರಂಭಿಸಲು ಮತ್ತು ಮುನ್ನಡೆಸಲು ಅವರಿಗೆ ಬೇಕಾದ ಕೌಶಲ್ಯಗಳು, ಪ್ರೇರಣೆ ಮತ್ತು ಸಾಮರ್ಥ್ಯಗಳನ್ನು ನೀಡುತ್ತದೆ. ಯೋಜನೆಯನ್ನು ನಡೆಸಲು ನಾವು ಈ ಯುವ ನಾಯಕರನ್ನು ತಾಂತ್ರಿಕ ಜ್ಞಾನ ಮತ್ತು ಹಣಕಾಸಿನೊಂದಿಗೆ ಸಜ್ಜುಗೊಳಿಸುತ್ತೇವೆ.

  • ಸಮುದಾಯ ನಿರ್ಮಾಣದ ಕೆಲಸಗಳು:

ನಾವು ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮಗಳ ಮೂಲಕ ಸಮುದಾಯಗಳನ್ನು ನಿರ್ಮಿಸುತ್ತೇವೆ. ಸಮುದಾಯ ನಿರ್ಮಾಣ ಕಾರ್ಯಗಳೊಂದಿಗೆ, ಇಡೀ ಸಮುದಾಯವು ಅವರ ಹಳ್ಳಿಯ ಅಭಿವೃದ್ಧಿಯಲ್ಲಿ ಭಾಗವಹಿಸುವುದನ್ನು ನಾವು ಖಚಿತಪಡಿಸುತ್ತೇವೆ, ಇದು ದೀರ್ಘಾವಧಿಯ ಯಶಸ್ಸನ್ನು ತಂದು ಕೊಡುತ್ತದೆ.

ಈ ಯೋಜನೆಗಳ ಪರಿಣಾಮಗಳು:

icon

ಭಾರತದಲ್ಲಿ 70,000

ಹಳ್ಳಿಗಳನ್ನು ತಲುಪಿದ್ದೇವೆ.

icon

90,200 ಸ್ವಚ್ಛತಾ ಶಿಬಿರಗಳನ್ನು

ನಡೆಸಲಾಗಿದೆ.

icon

2.5 ಲಕ್ಷ ಯುವಕರು

ಗ್ರಾಮೀಣ ಭಾರತದ 402 ಜಿಲ್ಲೆಗಳಲ್ಲಿ ತರಬೇತಿ ಪಡೆದಿದ್ದಾರೆ.

icon

22 ಲಕ್ಷ ರೈತರಿಗೆ

ನೈಸರ್ಗಿಕ ಕೃಷಿ ಪದ್ಧತಿಯ ತರಬೇತಿ ನೀಡಲಾಗಿದೆ.

icon

3.1 ಲಕ್ಷ+ ಜನರು

14 ವರ್ಷಗಳಲ್ಲಿ ವಿವಿಧ ವೃತ್ತಿಪರ ಕೌಶಲ್ಯಗಳಲ್ಲಿ ತರಬೇತಿ ಪಡೆದಿದ್ದಾರೆ.

icon

110 ಮಾದರಿ ಗ್ರಾಮ ಪಂಚಾಯಿತಿಗಳನ್ನು

ಅಭಿವೃದ್ಧಿಪಡಿಸಲಾಗುತ್ತಿದೆ.

icon

1.11 ಲಕ್ಷ+ ಮಹಿಳೆಯರು ವೃತ್ತಿಪರ

ಕೌಶಲ್ಯಗಳಲ್ಲಿ ತರಬೇತಿ ಪಡೆದಿದ್ದಾರೆ.

icon

3,819 ಮನೆಗಳು

62,000+ ಶೌಚಾಲಯಗಳು ಮತ್ತು 1000 ಜೈವಿಕ ಅನಿಲ ಘಟಕಗಳನ್ನು ನಿರ್ಮಿಸಲಾಗಿದೆ.

icon

43,980

ಸ್ವಚ್ಛತಾ ಅಭಿಯಾನಗಳನ್ನು ನಮ್ಮ ಸ್ವಯಂಸೇವಕರು ನಡೆಸಿದ್ದಾರೆ.

icon

45,000+ ಗ್ರಾಮೀಣ ಹದಿಹರೆಯದವರು

ಭಾರತದ 12 ರಾಜ್ಯಗಳ HIV/AIDS ಜಾಗೃತಿ (HARA) ಅಭಿಯಾನದ ಮೂಲಕ ಪ್ರಯೋಜನ ಪಡೆದಿದ್ದಾರೆ.

icon

12,831 ಯುವಕರು

ಡಿ-ಅಡಿಕ್ಷನ್ ಕಾರ್ಯಕ್ರಮಗಳಿಂದ ಪ್ರಯೋಜನ ಪಡೆದಿದ್ದಾರೆ.

icon

3,588 ಪಂಚಾಯತ್ ಸದಸ್ಯರು

ಉತ್ತಮ ಆಡಳಿತ ನಡೆಸಲು ತರಬೇತಿ ಪಡೆದಿದ್ದಾರೆ